Webdunia - Bharat's app for daily news and videos

Install App

ರಾಹುಲ್ ಗಾಂಧಿಯವರೇ , ನನ್ನತಂದೆ- ತಾಯಿಗಳನ್ನು ಕ್ಷಮಿಸಿರಿ: ಹರಿತ್ರಾ ಶ್ರೀಹರನ್

Webdunia
ಗುರುವಾರ, 20 ಫೆಬ್ರವರಿ 2014 (14:38 IST)
PTI
ರಾಜೀವ ಗಾಂಧಿ ಹತ್ಯೆ ಆರೋಪವನ್ನು ಎದುರಿಸುತ್ತಿರುವ ತನ್ನ ತಂದೆ- ತಾಯಿಗಳಾದ ಮುರುಗನ್ ಮತ್ತು ನಳಿನಿ ಯನ್ನು ಕ್ಷಮಿಸುವಂತೆ ಅವರ 22 ರ ಹರೆಯದ ಪುತ್ರಿ ಹರಿತ್ರಾ ಶ್ರೀಹರನ್ ರಾಹುಲ್ ಗಾಂಧಿಯವರನ್ನು ಕೇಳಿಕೊಂಡಿದ್ದಾಳೆ.

" ರಾಹುಲ್ ಗಾಂಧಿಯವರೇ ನನ್ನನ್ನು ಕ್ಷಮಿಸಿರಿ. ನನ್ನ ತಂದೆ- ತಾಯಿಗಳು ಸಾಕಷ್ಟು ಶಿಕ್ಷೆಯನ್ನು ಅನುಭವಿಸಿದ್ದಾರೆ, ಈಗ ಅವರಿಗೆ ಕ್ಷಮೆಯ ಅಗತ್ಯವಿದೆ. ನೀವು ಅತಿಯಾಗಿ ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಂಡ ನೋವು ಎಂತಹದೆಂದು ನನಗೆ ಅರ್ಥವಾಗುತ್ತದೆ " ಎಂದು ಖಾಸಗಿ ವಾಹಿನಿಯೊಂದರ ಜತೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಆಕೆ ಹೇಳಿದ್ದಾಳೆ. ಹರಿತ್ರಾ ಕಳೆದ 9 ವರ್ಷಗಳಿಂದ ಯುಕೆ ಯಲ್ಲಿ ವಾಸವಾಗಿದ್ದಾಳೆ.

ನಾನು ಅದೇ ಶಿಕ್ಷೆ ಅನುಭವಿಸಿದ್ದೇನೆ. ನನ್ನ ಪೋಷಕರ ಜತೆ ಇರಲು ಬಯಸುತ್ತೇನೆ. ನನ್ನ ಪೋಷಕರು ಜೀವಂತವಾಗಿದ್ದರೂ ಕೂಡ, ನಾನವರ ಜತೆ ಬದುಕಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ತಪ್ಪು ಮಾಡಿದ್ದರೂ ಕೂಡ ಸಾಕಷ್ಟು ಶಿಕ್ಷೆಯನ್ನು ಅನುಭವಿಸಿರುವ ಅವರು ಕ್ಷಮೆಗೆ ಅರ್ಹರಾಗಿದ್ದಾರೆ ಎಂದು ಆಕೆ ಹೇಳಿದ್ದಾಳೆ.

ಆಕೆಯ ಪೋಷಕರನ್ನು ಮುಕ್ತಗೊಳಿಸಲು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಸಂಪುಟ ನಿರ್ಧಾರ ಮಾಡಿರುವುದಕ್ಕೆ ಆಕೆ ಜಯಲಲಿತಾ ಅವರಿಗೆ ಧನ್ಯವಾದವನ್ನು ಪ್ರಕಟಿಸಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments