ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಂದು ವೇಳೆ ಪ್ರಧಾನಿಯಾದಲ್ಲಿ ದೇಶವನ್ನು ವಿಭಜಿಸುತ್ತಾರೆ. ಮೋದಿಯ ಪ್ರಧಾನಿಯಾಗುವ ಕನಸು ಯಾವತ್ತೂ ನನಸಾಗುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಮೋದಿ ಸಮುದಾಯಗಳನ್ನು ವಿಭಜಿಸುವ ನಾಯಕ. ಪ್ರಧಾನಿಯಾದ ನಂತರ ದೇಶವನ್ನು ವಿಭಜಿಸುವುದು ಖಚಿತ ಎಂದು ತಿಳಿಸಿದ್ದಾರೆ.
ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜನತೆ ಮೋದಿಯ ಪ್ರಧಾನಿಯಾಗುವ ಇಚ್ಚೆಯನ್ನು ತಿರಸ್ಕರಿಸಲಿದ್ದಾರೆ ಎಂದರು.
ವಾರಣಾಸಿಯಲ್ಲಿರುವ ಶಿವದೇವರು ಕೂಡಾ ದೇಶವನ್ನು ವಿಭಜಿಸುವ ಗುಣವನ್ನು ಹೊಂದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಕ್ಷಮಿಸುವುದಿಲ್ಲ ಎಂದು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಲೇವಡಿ ಮಾಡಿದ್ದಾರೆ.