Webdunia - Bharat's app for daily news and videos

Install App

ಮೋದಿ ಗುಜರಾತಲ್ಲಿ ನಿರ್ಮಾಣವಾಗಲಿದೆ 'ಜುರಾಸಿಕ್ ಪಾರ್ಕ್'

Webdunia
ಬುಧವಾರ, 30 ಮಾರ್ಚ್ 2011 (09:29 IST)
ನರೇಂದ್ರ ಮೋದಿ ಸಾಗರಕ್ಕೆ ಅಣೆಕಟ್ಟು ಕಟ್ಟಲು ಹೊರಟಿರುವುದು ಗೊತ್ತೇ ಇದೆ. ಈಗ ಅವರ ಸರದಿ 'ಜುರಾಸಿಕ್ ಪಾರ್ಕ್' ನಿರ್ಮಾಣ. ಹೌದು, ಇದುವರೆಗೆ ಹಾಲಿವುಡ್ ಸಿನಿಮಾಗಳಲ್ಲಿ ನೋಡಿದ್ದ ಡೈನೋಸಾರ್‌ಗಳಿಗಾಗಿ ಗುಜರಾತಿನಲ್ಲಿ ಪಾರ್ಕೊಂದು ನಿರ್ಮಾಣವಾಗಲಿದೆ.

ಆದರೆ ಇದು ಜೀವಂತ ಡೈನೋಸಾರ್‌ಗಳಿಗೆ ನಿರ್ಮಿಸಲಾಗುತ್ತಿರುವ ಪಾರ್ಕ್ ಅಲ್ಲ. ಬದಲಿಗೆ ಡೈನೋಸಾರ್‌ಗಳ ಪಳೆಯುಳಿಕೆ ಸಂಗ್ರಹಾಲಯ. ಈ ಹಿಂದೆ ಭಾರೀ ಸಂಖ್ಯೆಯ ಡೈನೋಸಾರ್‌ಗಳು ನೆಲೆಸಿದ್ದ ಖೇಡಾ ಜಿಲ್ಲೆಯ ರಯೋಲಿ ಗ್ರಾಮದಲ್ಲಿ ಈ ಪಾರ್ಕ್ ತಲೆ ಎತ್ತಲಿದೆ.

ಅಹಮದಾಬಾದಿನಿಂದ 85 ಕಿಲೋ ಮೀಟರ್ ದೂರದಲ್ಲಿರುವ ಬಾಲಸಿನೋರ್ ಎಂಬಲ್ಲಿದೆ ರಯೋಲಿ ಗ್ರಾಮ. ಇಲ್ಲಿ ಡೈನೋಸಾರ್ ವಿವಿಧ ಪ್ರಭೇದಗಳ 1000ಕ್ಕೂ ಹೆಚ್ಚು ಮೊಟ್ಟೆಗಳ ಪಳೆಯುಳಿಕೆಗಳು ಪತ್ತೆಯಾಗಿದ್ದವು. ಅದೇ ಸ್ಥಳವನ್ನು 'ಡೈನೋಸಾರ್ ಪ್ರವಾಸೋದ್ಯಮ'ವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಗುಜರಾತ್ ಸರಕಾರ ಕೈ ಹಾಕಿದೆ.

ಈ ಸ್ಥಳವು ಗುಜರಾತ್ ಪರಿಸರ ವಿಜ್ಞಾನ ಮತ್ತು ಅಧ್ಯಯನ ಪ್ರತಿಷ್ಠಾನದ ವಶದಲ್ಲಿದೆ.

ಕಚ್‌ನಲ್ಲಿ ಫ್ಲೆಮಿಂಗೋ ಸಿಟಿ ಅಥವಾ ಸಾಸನ್ ಗಿರ್‌ನಲ್ಲಿನ ಏಷಿಯಾ ಸಿಂಹ ಅಭಯಧಾಮಗಳು ಇರುವಂತೆ ಬಾಲಸಿನೋರ್‌ನಲ್ಲಿ ಡೈನೋಸಾರ್ ಪಳೆಯುಳಿಕೆ ಪಾರ್ಕ್ ಕೂಡ ವಿಶಿಷ್ಟವಾದುದು. ಇಲ್ಲಿನ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅಂತಾರಾಷ್ಟ್ರೀಯ ಆಕರ್ಷಣಾ ಕೇಂದ್ರವನ್ನಾಗಿ ಪರಿವರ್ತಿಸಲು ನಾವು ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಜಯನಾರಾಯಣ್ ವ್ಯಾಸ್ ತಿಳಿಸಿದ್ದಾರೆ.

ಇಲ್ಲಿ ಮೊತ್ತ ಮೊದಲ ಬಾರಿ ಡೈನೋಸಾರ್ ಪಳೆಯುಳಿಕೆಗಳು ಪತ್ತೆಯಾದದ್ದು 1981ರಲ್ಲಿ. ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಗೆ ಇದು ಸಿಕ್ಕಿತ್ತು. ಇದಾದ ಒಂದು ವರ್ಷದ ನಂತರ ಸುಮಾರು 1000 ಡೈನೋಸಾರ್ ಮೊಟ್ಟೆಗಳು ಸಿಕ್ಕಿದ್ದವು. ಬಳಿಕ ಭಾರೀ ಸಂಖ್ಯೆಯ ವಿಜ್ಞಾನಿಗಳು ಇಲ್ಲಿಗೆ ಅಧ್ಯಯನಕ್ಕಾಗಿ ಬರುತ್ತಿದ್ದಾರೆ.

ವಿಜ್ಞಾನಿಗಳ ಪ್ರಕಾರ ಇಲ್ಲಿ ಡೈನೋಸಾರ್‌ಗಳ ಕನಿಷ್ಠ ಏಳು ಪ್ರಭೇದಗಳು ಬದುಕಿದ್ದವು. ಸಿಕ್ಕಿರುವ ಪಳೆಯುಳಿಕೆಗಳು 6.5 ಕೋಟಿ ವರ್ಷಗಳಷ್ಟು ಪುರಾತನವಾದುವು ಎಂದು ಅವರು ಅಂದಾಜಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಗ ರಾಜ್ಯಾಧ್ಯಕ್ಷನಾಗಿ ಮುಂದುವರೆಯಲು ಬಿಎಸ್‌ವೈ, ಸಿದ್ದರಾಮಯ್ಯ ಜತೆ ಅಡ್ಜಸ್ಟ್‌ಮೆಂಟ್: ಬಸನಗೌಡ ಯತ್ನಾಳ್ ಹೊಸ ಬಾಂಬ್

Bengaluru Rains: ಬೆಂಗಳೂರಿನಲ್ಲಿ ಭಾರೀ ಮಳೆ, ಸಂಜೆ ಹುಷಾರು

ಮಾತೆತ್ತಿದರೆ ದ್ರೌಪದಿ ಮುರ್ಮು ಹೆಸರು ಹೇಳುವ ಬಿಜೆಪಿ ಪ್ರಧಾನಿಯನ್ನಾಗಿ ಯಾಕೆ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ಸತತ 8 ನೇ ಭಾರೀ ಸ್ಚಚ್ಚ ನಗರ ಹೆಗ್ಗಳಿಕೆಗೆ ಪಾತ್ರವಾದ ಇಂದೋರ್‌, ಮೂರನೇ ಸ್ಥಾನದಲ್ಲಿ ಮೈಸೂರು

ಮೆಟ್ರೊ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್‌: ಮೆಟ್ರೊ ಮಾರ್ಗಗಳಲ್ಲಿ ಸಿಗಲಿದೆ ವೈಫೈ

Show comments