ಮೋದಿಯ ಬೃಹತ್ ರ್ಯಾಲಿಗೆ ಅಡ್ವಾಣಿ, ಸುಷ್ಮಾ ಗೈರು.
ನವದೆಹಲಿ , ಭಾನುವಾರ, 29 ಸೆಪ್ಟಂಬರ್ 2013 (16:50 IST)
ಕೇಂದ್ರ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇಂದಿನ ಐತಿಹಾಸಿಕ ರ್ಯಾಲಿಯಲ್ಲಿ ಮತ್ತೆ ಸಾಬೀತಾಗಿದೆ. ಬಿಜೆಪಿ ಮುಖಂಡ ಎಲ್ಕೆ ಅಡ್ವಾಣಿ ಮತ್ತು ವಿ.ಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಈ ಐತಿಹಾಸಿಕ ರ್ಯಾಲಿಗೆ ಗೈರು ಹಾಜರಾಗಿದ್ದರು. ಬಿಜೆಪಿಯಲ್ಲಿ ಹಿರಿಯರನ್ನು ಮೂಲೆ ಗುಂಪುಮಾಡಿ ಗುಜರಾತ್ ಮುಖ್ಯಮಂತ್ರಿ ನರೆಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಮೋದಿಯ ವಿರುದ್ಧ ಮೌನ ಸಮರಕ್ಕಿಳಿದ ಬಿಜೆಪಿ ವರಿಷ್ಟರು ಇಂದಿನ ಮೋದಿಯ ಬೃಹತ್ ರ್ಯಾಲಿಗೆ ಗೈರು ಹಾಜರಾಗುವುದರ ಮೂಲಕ ತಮ್ಮ ಅಸಮಾಧಾನವನ್ನು ಇಡೀ ದೇಶಕ್ಕೆ ತಿಳಿಸಿದ್ದಾರೆ.ಈ ಹಿಂದೆಯೂ ಕೂಡ ನರೆಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ವಿಷಯದಲ್ಲಿ ಎಲ್ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ವಿರೋಧಿಸಿದ್ದರು. ಹಿರಿಯ ನಾಯಕರ ವಿರೋಧದ ನಡುವೆಯೂ ಬಿಜೆಪಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಹೀಗಾಗಿ ಸುಷ್ಮಾ ಸ್ವರಾಜ್ ಮತ್ತು ಎಲ್ಕೆ ಅಡ್ವಾಣಿ ಇಂದಿನ ದೆಹಲಿಯ ಐತಿಹಾಸಿಕ ರ್ಯಾಲಿಗೆ ಗೈರು ಹಾಜರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.