ಅಲ್ಲದೆ ಅನಂತನಾಗ್, ರವಿಶಂಕರ್, ಶೋಭ್ರಾಜ್, ಆದಿಲೋಕೇಶ್, ಬುಲೆಟ್ ಪ್ರಕಾಶ್, ಮಿತ್ರ, ಅರುಣ್ ಸಾಗರ್, ಶ್ರುತಿನಾಯ್ಡು, ಟೆನ್ನಿಸ್ ಕೃಷ್ಣ ಮುಂತಾದವರು ಚಿತ್ರದ ಭಾಗವಾಗಿದ್ದಾರೆ. ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎ.ವೆಂಕಟೇಶ್ ಅವರ ಛಾಯಾಗ್ರಹಣವಿದೆ.
ಹಾಡುಗಳನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಬೆಂಗಳೂರು, ಮಲೇಶಿಯಾದಲ್ಲಿ ಎಪ್ಪತ್ತು ದಿನಗಳ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.ಅದು ಕಂಪ್ಲೀಟ್ ಆದರೆ ಮಂದಿ ಮುಂದೆ ಬರಲು ಸಿದ್ಧ ಆಗುತ್ತೆ ಭಜರಂಗ ಬಲಿ!