ಭಜರಂಗ ಬಲಿ ಜೈ ಎಂದು ಕೆಲ ಮುಗಿಸಿದೆ... ಇದು ಅಜಯ್ ಹೊಸ ಚಿತ್ರ !
, ಶುಕ್ರವಾರ, 11 ಏಪ್ರಿಲ್ 2014 (09:20 IST)
ಹರಿಮೋನಿಯಂ ರೀಟ್ಸ್ ಲಾಂಛನದಲ್ಲಿ ಎಸ್.ಟಿ.ಪಾಲ್ರಾಜ್ ಅವರು ನಿರ್ಮಿಸುತ್ತಿರುವ 'ಜೈ ಭಜರಂಗ ಬಲಿ' ಸದ್ದಿಲ್ಲದೇ ತನ್ನ ಕೆಲಸ ಸಾಗಿಸಿದೆ. ಅಜಯ್ ರಾವ್ ಅವರ ನಟನೆಯ ಈ ಚಿತ್ರದ ರೀರೆಕಾರ್ಡಿಂಗ್ ಹರಿಕೃಷ್ಣ ಸ್ಟುಡಿಯೋದಲ್ಲಿ ಮುಕ್ತಾಯವಾಗಿದೆ. ರಾಜನ್ ಸ್ಟುಡಿಯೋದಲ್ಲಿ ಸ್ಪೆಷಲ್ ಎಫ್ಫೆಕ್ಟ್ಸ್ಅಳವಡಿಸಲಾಗುತ್ತಿದೆ. ಚೆನ್ನೈನಲ್ಲಿ ಗ್ರಾಫಿಕ್ಸ್ ಹಾಗೂ ಡಿ ಐ ಕಾರ್ಯ ನಡೆಯುತ್ತಿದೆ. 'ಸಂಗಮ 'ಚಿತ್ರದ ನಂತರ ರವಿವರ್ಮ ಅವರು ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಅಜಯ್ ಜೊತೆಯಾಗಿದ್ದಾರೆ ಸಿಂಧು ಲೋಕನಾಥ್.
ಅಲ್ಲದೆ ಅನಂತನಾಗ್, ರವಿಶಂಕರ್, ಶೋಭ್ರಾಜ್, ಆದಿಲೋಕೇಶ್, ಬುಲೆಟ್ ಪ್ರಕಾಶ್, ಮಿತ್ರ, ಅರುಣ್ ಸಾಗರ್, ಶ್ರುತಿನಾಯ್ಡು, ಟೆನ್ನಿಸ್ ಕೃಷ್ಣ ಮುಂತಾದವರು ಚಿತ್ರದ ಭಾಗವಾಗಿದ್ದಾರೆ. ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎ.ವೆಂಕಟೇಶ್ ಅವರ ಛಾಯಾಗ್ರಹಣವಿದೆ.ಹಾಡುಗಳನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಬೆಂಗಳೂರು, ಮಲೇಶಿಯಾದಲ್ಲಿ ಎಪ್ಪತ್ತು ದಿನಗಳ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.ಅದು ಕಂಪ್ಲೀಟ್ ಆದರೆ ಮಂದಿ ಮುಂದೆ ಬರಲು ಸಿದ್ಧ ಆಗುತ್ತೆ ಭಜರಂಗ ಬಲಿ!