Webdunia - Bharat's app for daily news and videos

Install App

ಮೊಯ್ಲಿ ಕಾರ್ಪೊರೇಟ್ ಕಪ್ಪುಚುಕ್ಕೆ ಎಂದು ಕರೆದ ಮಹೇಶ್ ಭಟ್

Webdunia
ಶನಿವಾರ, 1 ಮಾರ್ಚ್ 2014 (18:48 IST)
PR
PR
ನವದೆಹಲಿ: ಬಾಲಿವುಡ್ ಚಿತ್ರನಿರ್ಮಾಪಕ ಮಹೇಶ್ ಭಟ್ ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ವೀರಪ್ಪ ಮೊಯ್ಲಿ ಅವರನ್ನು ಕಾರ್ಪೊರೇಟ್ ಕಪ್ಪು ಚುಕ್ಕೆ ಎಂದು ಕರೆದಿದ್ದಾರೆ.ತಮ್ಮ ಪೂರ್ವಾಧಿಕಾರಿ ಜಯಂತಿ ನಟರಾಜನ್ ನಿರ್ಧಾರವನ್ನು ಬದಲಿಸಿ 200 ವಿಧಗಳ ಕುಲಾಂತರಿ ತಳಿ ಬೀಜಗಳ ಕ್ಷೇತ್ರ ಪರೀಕ್ಷೆಗಳಿಗೆ ಮೊಯ್ಲಿ ಅವಕಾಶ ನೀಡಿದ್ದರಿಂದ ಭಟ್ ಟ್ವಿಟರ್‌ನಲ್ಲಿ ಸಚಿವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಮೊಯ್ಲಿ ಕಾರ್ಪೊರೇಟ್ ಕಪ್ಪು ಚುಕ್ಕೆ. ಭಾರತ 260 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುವಾಗ ಅದಕ್ಕೆ ಕುಲಾಂತರಿ ತಳಿ ಬೆಳೆಗಳು ಏಕೆ ಬೇಕು ಎಂಬ ಬಗ್ಗೆ ಮೊಯ್ಲಿ ವಿವರಣೆ ನೀಡಬೇಕು ಎಂದು ಭಟ್ ಹೇಳಿದ್ದಾರೆ.

ಕುಲಾಂತರಿ ತಳಿ ಬೆಳೆಯ ವಿರೋಧಿ ನಿಲುವನ್ನು ಹೊಂದಿರುವ ಭಟ್, ಮಾನವ ಆರೋಗ್ಯವನ್ನು ಬಲಿಕೊಟ್ಟು ಕುಲಾಂತರಿ ಬೆಳೆಯ ಉತ್ಪಾದನೆಯನ್ನು ವಾಸ್ತವ ರೂಪಕ್ಕೆ ತರುವ ಬಹುರಾಷ್ಟ್ರೀಯ ಬೀಜ ಕಂಪೆನಿಗಳನ್ನು ಅವರು ಟೀಕಿಸಿದರು. ಲಾಭದ ಹಸಿವಿನಿಂದ ಕೂಡಿರುವ ಉದ್ಯಮಗಳು ಮಾನವಜನಾಂಗದ ವಿರುದ್ಧ ವಿಜ್ಞಾನವನ್ನು ತಿರುಗಿಸುತ್ತಿವೆ ಎಂದು ಆರೋಪಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments