Webdunia - Bharat's app for daily news and videos

Install App

ಮೊಬೈಲ್ ಫೋನ್ ರಿಚಾರ್ಜ್ ವೋಚರ್ ಕದ್ದ 12 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಗ್ರಾಮಸ್ಥರು

Webdunia
ಮಂಗಳವಾರ, 31 ಡಿಸೆಂಬರ್ 2013 (14:29 IST)
PTI
ಮೊಬೈಲ್ ಫೋನ್ ರಿಚಾರ್ಜ್ ವೋಚರ್ ಮತ್ತು 300 ರೂಪಾಯಿ ಮೌಲ್ಯದ ಗುಟಕಾ ಪ್ಯಾಕೆಟ್‌ಗಳನ್ನು ಕದ್ದ 12 ವರ್ಷದ ಬಾಲಕನನ್ನು ಗ್ರಾಮಸ್ಥರು ಹತ್ಯೆ ಮಾಡಿದ ದಾರುಣ ಘಟನೆ ಪೂರ್ನಿಯಾ ಜಿಲ್ಲೆಯಲ್ಲಿ ನಡೆದಿದೆ.

ಬಾಲಕನ ಹತ್ಯೆ ಮಾಡಿದ ಎಂಟು ಮಂದಿ ಗ್ರಾಮಸ್ಥರ ವಿರುದ್ಧ ಪೊಲೀಸರು ಹತ್ಯಾ ಪ್ರಕರಣ ದಾಖಲಿಸಿದ್ದಾರೆ.

ಪೂರ್ನಿಯಾ ಜಿಲ್ಲೆಯ ಥಾಡಿ ಗ್ರಾಮದಲ್ಲಿ ಇಬ್ಬರು ಬಾಲಕರಾದ ಪಿಂಟು (13) ಮತ್ತು ಚೋಟು (12) ಅಂಗಡಿಯೊಂದರಿಂದ ಮೊಬೈಲ್ ರಿಚಾರ್ಜ್ ವೋಚರ್ ಮತ್ತು ಗುಟಕಾ ಪ್ಯಾಕೇಟ್‌ಗಳ ಕಳ್ಳತನ ಮಾಡಿದ್ದರು. ಕಳ್ಳತನದ ಆರೋಪದ ಮೇಲೆ ಪಂಚಾಯಿತಿ ಕರೆಯಲಾಗಿತ್ತು. ಪಂಚಾಯತಿಯ ಮುಂದೆ ಬಾಲಕರು ತಪ್ಪನ್ನು ಒಪ್ಪಿಕೊಂಡಿದ್ದರು. ಪಿಂಟು ತಂದೆ ತಮ್ಮ ಮಗನನ್ನು ಕ್ಷಮಿಸುವಂತೆ ಮನವಿ ಮಾಡಿದರು. ಆದರೆ ಮತ್ತೊಬ್ಬ ಬಾಲಕ ಚೋಟುವಿಗೆ ತಂದೆ ಇರಲಿಲ್ಲ. ತಾಯಿ ಬೇರೆ ಗ್ರಾಮಕ್ಕೆ ತೆರಳಿದ್ದಳು.ಯಾರೂ ಬಾಲಕನನ್ನು ಸಮರ್ಥಿಸಿಕೊಳ್ಳದಿದ್ದಾಗ ಗ್ರಾಮಸ್ಥರು ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.

ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಕುಮಾರ್ ಸತ್ಯಾರ್ಥಿ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments