Webdunia - Bharat's app for daily news and videos

Install App

ಮುಸ್ಲಿಂ ನಟರಿಗೆ 'ಬಾಂಬೆ' ನಿಷಿದ್ಧ: ಠಾಕ್ರೆಗೆ ಶಾರೂಖ್ ಟಾಂಗ್

Webdunia
ಶುಕ್ರವಾರ, 18 ಮಾರ್ಚ್ 2011 (20:29 IST)
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಕಿಸ್ತಾನೀಯರು ಪಾಲ್ಗೊಳ್ಳುವ ಬಗೆಗಿನ ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್ ಮಾತುಗಳು ಶಿವಸೇನೆ ವರಿಷ್ಠ ಬಾಳ್ ಠಾಕ್ರೆಯವರಿಗೆ ಅಪಥ್ಯವಾಗಿ ವಿವಾದ ಉಂಟಾದ ನಂತರ ಇದೀಗ ಮತ್ತೊಂದು ಸುತ್ತಿನ ಕದನ ಲಕ್ಷಣಗಳು ಗೋಚರಿಸಿವೆ. ಮುಸ್ಲಿಂ ನಟರು ಮುಂಬೈಯನ್ನು 'ಬಾಂಬೆ' ಎನ್ನುವಂತಿಲ್ಲ ಎಂದು ಶಾರೂಖ್ ಹೇಳಿರುವುದೇ ಈಗಿನ ವಿವಾದ.

' ಇಂಡಿಯಾ ಟುಡೇ ಶೃಂಗ'ದಲ್ಲಿ ಭಾಗವಹಿಸಿದ್ದ 45ರ ಹರೆಯದ ನಟ, ಬಾಳ್ ಠಾಕ್ರೆಯವರ ಹೆಸರನ್ನು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಕೋಮುವಾದ ಮತ್ತು ಭಾರತದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡುತ್ತಿರುವುದರ ಬಗ್ಗೆ ವಿಶ್ಲೇಷಣೆ ನಡೆಸಿದರು.

ಭಾರತದ ಸಿನಿಮಾ ಈಗ ಮುಂಬೈಯಿಂದ ಮೆಲ್ರೋಸ್ (ಬ್ರಿಟನ್‌ನ ಒಂದು ಪುಟ್ಟ ನಗರ) ತನಕ ಹೋಗುತ್ತಿದೆ. ವಿದೇಶಗಳ ನಿರ್ಮಾಪಕ, ನಿರ್ದೇಶಕರುಗಳು ಭಾರತ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಾನು 'ಬಾಂಬೆಯಿಂದ ಬವೆರ್ಲಿ ಹಿಲ್ಸ್'ವರೆಗೆ (ಅಮೆರಿಕಾದ ಒಂದು ಪುಟ್ಟ ನಗರ) ಎಂದು ಹೇಳಲು ಹೆಚ್ಚು ಒತ್ತು ನೀಡುತ್ತೇನೆ. ಆದರೆ ಈ ರೀತಿಯ ಆದಿ ಪ್ರಾಸಗಳನ್ನು ಬಳಸಲು ಮುಸ್ಲಿಂ ಕಲಾವಿದರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದರು.

' ಬಾಂಬೆ'ಗೆ 'ಮುಂಬೈ' ಎಂದು ಮರು ನಾಮಕರಣ ಮಾಡಿದ ನಂತರವೂ ಬಾಂಬೆ ಎಂದು ಬಳಸುತ್ತಿರುವವರ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಠಾಕ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇದನ್ನೇ ಶಾರೂಖ್ ಪರೋಕ್ಷವಾಗಿ ಉಲ್ಲೇಖಿಸಿದರು.

ಧರ್ಮ ಮತ್ತು ರಾಜಕೀಯವನ್ನು ಯಾವ ಕಾರಣಕ್ಕೂ ಬೆರೆಸಬಾರದು ಎಂದ ಶಾರೂಖ್, ಕೋಮುವಾದವನ್ನು ಕೀಳು ಸ್ಥಾನ ಎಂದು ಅಭಿಪ್ರಾಯಪಟ್ಟರು.

ರಾಜಕಾರಣಿಗಳು ಧರ್ಮವನ್ನು ತಮ್ಮ ದಾಳವನ್ನಾಗಿ ಬಳಸಬಾರದು ಎಂದು ಪ್ರತಿಪಾದಿಸುವವನು ನಾನು. ಅದು ಸ್ವೀಕಾರಾರ್ಹವಲ್ಲ. ಇದರಿಂದಾಗಿ ನೈಜ ಅಗತ್ಯ ರಾಜಕೀಯ ವಿಚಾರಗಳಾಗಿರುವ ಶಿಕ್ಷಣ, ಪ್ರಗತಿ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿ ಮುಂತಾದುವು ಮೂಲೆಗುಂಪಾಗಿವೆ ಎಂದರು.

' ನಾನೊಬ್ಬ ಮುಸ್ಲಿಂ. ನಾನು ಮದುವೆಯಾಗಿರುವುದು ಹಿಂದೂ ಮಹಿಳೆಯನ್ನು (ಗೌರಿ). ನನ್ನ ಮಕ್ಕಳಿಗೆ ಎಲ್ಲಾ ಧರ್ಮಗಳೂ ಗೊತ್ತು. ಇದರ ಬಗ್ಗೆ ತಿಳಿದಿರಬೇಕು ಎನ್ನುವುದು ನನ್ನ ಪ್ರಜ್ಞಾಪೂರ್ವಕ ನಿರ್ಧಾರ. ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ನೀವು ಮತ್ತು ನಿಮ್ಮ ದೇವರ ನಡುವೆ ಮಧ್ಯ ಪ್ರವೇಶಿಸಲು ಈ ವಿಶ್ವದಲ್ಲಿ ಯಾರಿಗೂ ಅಧಿಕಾರವಿಲ್ಲ' ಎಂದು ವಿವರಣೆ ನೀಡಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

Show comments