Webdunia - Bharat's app for daily news and videos

Install App

ಮುಖಭಂಗ:ಮಲೇಶಿಯ ಜತೆ ಚರ್ಚೆ

Webdunia
ಶುಕ್ರವಾರ, 30 ನವೆಂಬರ್ 2007 (20:48 IST)
PTI
ಮಲೇಶಿಯ ಸರ್ಕಾರದ ಸಚಿವ ನಾಜ್ರಿ ಅಜೀಜ್ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಮುಖಭಂಗ ಮಾಡಿದ ವಿಷಯವನ್ನು ಮಲೇಶಿಯ ಸರ್ಕಾರದ ಜತೆ ಸಮಾಲೋಚಿಸುವುದಾಗಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಲೋಕಸಭೆಯಲ್ಲಿ ಶುಕ್ರವಾರ ತಿಳಿಸಿದರು. ಕೌಲಾಲಂಪುರದಲ್ಲಿ ನ.25ರಂದು ಭಾರತೀಯ ಜನಾಂಗದ ಜನರನ್ನು ಮಲೇಶಿಯ ಪೊಲೀಸರು ಥಳಿಸಿದ ಘಟನೆ ಬಗ್ಗೆ ಕರುಣಾನಿಧಿ ನೋವು ತೋಡಿಕೊಂಡಿದ್ದಕ್ಕೆ ಮಲೇಶಿಯ ಸಚಿವರು ಕರುಣಾನಿಧಿ ಅವರನ್ನು ಸುಮ್ಮನಿರಿಸಿದ್ದರು.

ವಿದೇಶದಲ್ಲಿ ವಾಸಿಸುವ ಭಾರತೀಯ ಮೂಲದ ಜನರ ಏಳಿಗೆ ಬಗ್ಗೆ ಸರ್ಕಾರ ತೀವ್ರ ಕಾಳಜಿ ಹೊಂದಿದೆ ಎಂದು ಹೇಳಿದ ಅವರು ಮಲೇಶಿಯದಲ್ಲಿ ಭಾರತೀಯ ಮೂಲದ ಅಪಾರ ಸಂಖ್ಯೆಯ ಜನರಿದ್ದು, ಅವರು ಆ ದೇಶದ ಪೌರರಾಗಿದ್ದಾರೆಂದು ಹೇಳಿದರು.

ಮಲೇಶಿಯ ಜತೆ ನಮಗೆ ಸ್ನೇಹಸಂಬಂಧವಿದ್ದು, ಆ ರಾಷ್ಟ್ರದ ಅಧಿಕಾರಿಗಳ ಜತೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪರ್ಕ ಹೊಂದಿರುವುದಾಗಿ ಅವರು ನುಡಿದರು. ಈ ವಿಷಯವು ಗುರುವಾರ ಮತ್ತು ಶುಕ್ರವಾರ ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿಯಾಗಿ ಸಂಸದರು ಪಕ್ಷಭೇದ ಮರೆತು ಮಲೇಶಿಯ ಸರ್ಕಾರದ ಜತೆ ಕರುಣಾನಿಧಿ ಅವರಿಗೆ ಅವಮಾನ ಮಾಡಿದ ವಿಷಯವನ್ನು ಪ್ರಸ್ತಾಪಿಸುವಂತೆ ಒತ್ತಾಯಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments