Webdunia - Bharat's app for daily news and videos

Install App

ಮುಂಬೈ ದಾಳಿ ಹಿಂದೆ 'ದಕ್ಷಿಣ ಭಾರತೀಯರು': ಪಾಕಿಗಳು

Webdunia
ಬುಧವಾರ, 23 ಮಾರ್ಚ್ 2011 (12:30 IST)
2008 ರ ಮುಂಬೈ ದಾಳಿ ಮಾಡಿರುವುದು ಪಾಕಿಸ್ತಾನೀಯರು ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಹೇಳಿದ್ದರೆ, ಇನ್ನೂ ಕೆಲವರು, ಆ ದಾಳಿಕೋರರು ದಕ್ಷಿಣ ಭಾರತೀಯರಂತೆ ಕಾಣುತ್ತಿದ್ದರು ಎಂದು ಶಂಕೆ ವ್ಯಕ್ತಪಡಿಸಿರುವ ಮಾಹಿತಿಗಳು ವಿಕಿಲೀಕ್ಸ್ ಮೂಲಕ ಬಹಿರಂಗವಾಗಿದೆ.

ಮುಂಬೈ ದಾಳಿಯ ಮೂಲ ಪಾಕಿಸ್ತಾನ ಆಗಿರಬಹುದು ಎಂಬುದನ್ನು ಪಾಕಿಸ್ತಾನದ ಕೆಲವು ಪಂಜಾಬಿಗಳು ನಂಬಿರುವ ಹೊರತಾಗಿಯೂ, ಅಲ್ಲಿನ ರಾಜಕಾರಣಿಗಳು ಮತ್ತು ವಕೀಲರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತವು ತನ್ನ ಆಂತರಿಕ ತೀವ್ರವಾದಿ ಗುಂಪುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಈ ದಾಳಿಗೆ ಅವರೇ ಕಾರಣ ಎಂದು ಹೇಳಿದ್ದರು.

ಮುಂಬೈ ದಾಳಿ ಹಿಂದೆ ಪಾಕಿಸ್ತಾನೀಯರಿದ್ದಾರೆ ಎಂದು ದಾಳಿಯ ಬೆನ್ನಿಗೆ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ ಬೆನ್ನಿಗೆ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭಾರತದಲ್ಲೇ ಸಾಕಷ್ಟು ತೀವ್ರವಾದಿಗಳ ಗುಂಪಿವೆ. ಅವುಗಳದ್ದೇ ಕೃತ್ಯವಿದು ಎಂಬ ಪ್ರತ್ಯಾರೋಪಗಳೂ ಕೇಳಿ ಬಂದಿದ್ದವು.

ಪಂಜಾಬ್ ಹೈಕೋರ್ಟ್ ನ್ಯಾಯಾಧೀಶ ಬಿಲಾಲ್ ಖಾನ್ ಅವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಹಿರಿಯ ವಕೀಲರೊಬ್ಬರು, ಮುಂಬೈ ದಾಳಿ ದಕ್ಷಿಣ ಭಾರತೀಯರ ಕೃತ್ಯ ಎಂದು ಆರೋಪಿಸಿದ್ದರು.

' ದಾಳಿಕೋರರು ಪಾಕಿಸ್ತಾನೀಯರಂತೆ ಕಾಣಿಸುತ್ತಿಲ್ಲ. ಅವರ ಫೋಟೋಗಳನ್ನು ನೋಡಿದಾಗ ದಕ್ಷಿಣ ಭಾರತೀಯರಂತೆ ಕಾಣುತ್ತಿದ್ದಾರೆ. ಇಂತಹ ದೊಡ್ಡ ದಾಳಿಯನ್ನು ಕೇವಲ 10 ಮಂದಿ ನಡೆಸಲು ಹೇಗೆ ಸಾಧ್ಯ' ಎಂದು ಅವರು ಪ್ರಶ್ನಿಸಿದ್ದರು.

ದಾಳಿ ಮಾಡಿದ್ದು ಪಾಕಿಸ್ತಾನೀಯರು...
ಅಮೆರಿಕಾ ಸೆನೆಟರುಗಳಾದ ಜಾನ್ ಮೆಕ್‌ಕೈನ್ ಮತ್ತು ಲಿಂಡ್ಸೆ ಗ್ರಹಾಂ ಜತೆ ಡಿಸೆಂಬರ್ 6ರಂದು ಮಾತನಾಡಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಎಂಎಲ್ಎನ್ ಮುಖಂಡ ನವಾಜ್ ಶರೀಫ್, ಮುಂಬೈ ದಾಳಿ ಮಾಡಿದ್ದು ಪಾಕಿಸ್ತಾನೀಯರೇ ಹೌದು ಎಂದಿದ್ದರು.

ಮುಂಬೈ ದಾಳಿ ಮಾಡಿದ್ದು ಪಾಕಿಸ್ತಾನೀಯರು ಎಂಬುದರಲ್ಲಿ ಸಂಶಯವಿಲ್ಲ. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದರು ಎಂದು ಅಮೆರಿಕಾ ರಾಯಭಾರಿಗಳು ವರದಿ ಮಾಡಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವರ್ಷದ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಹೆಡ್‌ಕಾನ್‌ಸ್ಟೇಬಲ್‌ ಕ್ವಾಟ್ರಸ್‌ನಲ್ಲೇ ಆತ್ಮಹತ್ಯೆ

ಅತ್ಯಾಚಾರ ಪ್ರಕರಣ: ಇದೇ 30ರಂದು ಪ್ರಜ್ವಲ್ ರೇವಣ್ಣಗೆ ಜಾಮೀನಾ, ಜೈಲಾ, ಮಹತ್ವದ ತೀರ್ಪು

ಲೈವ್‌ನಲ್ಲಿ ವರದಿ ಮಾಡುತ್ತಿರುವಾಗಲೇ ಪ್ರವಾಹದಲ್ಲಿ ಕೊಚ್ಚಿ ಹೋದ ಪಾಕ್‌ ವರದಿಗಾರ, Viral Vdeo

ಶಾಸಕರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವಾಗಲೇ ರಮ್ಮಿ ಆಡುತ್ತಾ ಕೂತಾ ಉಪ ಅರಣ್ಯ ಸಂರಕ್ಷಣಾಧಿಕಾರಿ

ನೂರಾರು ಹುಡುಗರ ಗುಂಪೊಂದು ಹಾವು ಹಿಡಿದು ಗುಡ್ಡವೇರಿದ ವಿಡಿಯೋ, ಭಯಾನಕವಾಗಿರುವ ಸಂಪ್ರದಾಯದ ಹಿಂದಿದೆ ನಂಬಿಕೆ

Show comments