ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಸಭೆ ಸಂಪೂರ್ಣವಾಗಿ ಯಶಸ್ವಿಗೊಳಿಸಲು ಬಿಜೆಪಿ ಪಡೆ ಸಿದ್ದವಾಗಿದೆ. ಮುಂಬೈನಲ್ಲಿ ನಡೆಯಲಿರುವ ಮೋದಿ ಸಭೆಗೆ 10 ಸಾವಿರ ಚಾಯಿವಾಲಗಳಿಗೆ ಆಹ್ವಾನ ನೀಡುವ ಮೂಲಕ ಕಾಂಗ್ರೆಸ್ಗೆ ಪ್ರಬಲ ಸಂದೇಶ ರವಾನಿಸಿದೆ.
ನಗರದಲ್ಲಿರುವ 10 ಸಾವಿರ ಚಾಯಿವಾಲಾಗಳನ್ನು ಸಭೆಗೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಮೋದಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಶೀಘ್ರದಲ್ಲಿ ಆಹ್ವಾನ ಪತ್ರಗಳನ್ನು ಕಳುಹಿಸಲಾಗುವುದು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ನರೇಂದ್ರ ಮೋದಿ ರಾಜಕೀಯಕ್ಕೆ ಬರುವ ಮುನ್ನ ಹೋಟೆಲ್ನಲ್ಲಿ ಚಹಾ ಮಾರುತ್ತಿದ್ದರಿಂದ, ಅವರ ಸಭೆಗೆ ಚಾಯಿವಾಲಾಗಳಿಗೆ ಆಹ್ವಾನ ನೀಡಲಾಗಿದೆ. ಸಾಮಾನ್ಯ ವರ್ಗದ ಮೋದಿ ಪ್ರಬಲ ನೆಹರು -ಗಾಂಧಿ ಕುಟುಂಬದ ವಿರುದ್ಧ ಹೋರಾಡುವ ಸಂಕೇತವಾಗಿದೆ ಎಂದು ಬಿಜೆಪಿ ತಿಳಿಸಿದೆ.
ಮೋದಿ ಸಭೆಗೆ 5 ಸಾವಿರ ಖಾಸಗಿ ಬಸ್ಗಲು ಸೇರಿದಂತೆ ಬಿಜೆಪಿಯ ರಾಜ್ಯ ಘಟಕ ರಾಜ್ಯದ ಇತರ ಭಾಗಗಳಿಂದ ಬರುವ ಪಕ್ಷದ ಕಾರ್ಯಕರ್ತರಿಗಾಗಿ 20-22 ರೈಲುಗಳನ್ನು ಮುಂಗಡವಾಗಿ ಕಾದಿರಿಸಿದೆ
ಬಿಜೆಪಿಯ ಯುವ ಶಕ್ತಿ ಘಟಕದ ಪರವಾಗಿ 20 ಸಾವಿರ ವಿದ್ಯಾರ್ಥಿಗಳು ಕೂಡಾ ಮೋದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.