Select Your Language

Notifications

webdunia
webdunia
webdunia
webdunia

ಡಾ. ಅಂಬರೀಶ್ ಆಗಮನದ ಖುಷಿಯಲ್ಲಿ ಕರ್ನಾಟಕದ ಜನತೆ...

ಡಾ. ಅಂಬರೀಶ್ ಆಗಮನದ ಖುಷಿಯಲ್ಲಿ ಕರ್ನಾಟಕದ ಜನತೆ...
, ಶುಕ್ರವಾರ, 11 ಏಪ್ರಿಲ್ 2014 (09:15 IST)
PR
ದೇಶದಲ್ಲಿ ಲೋಕಸಭಾ ಚುನಾವಣೆಯ ಟೆನ್ಶನ್. ಅದಕ್ಕಿಂತಲೂ ಕರ್ನಾಟಕದ ಅಂಬರೀಶ್ ಅಭಿಮಾನಿಗಳಿಗೆ ಅನಾರೋಗ್ಯಕ್ಕೆ ತುತ್ತಾಗಿ ಈಗ ಆರೋಗ್ಯವಂತರಾಗಿ ತಾಯ್ನಾಡಿಗೆ ಹಿಂತಿರುಗುತ್ತಿರುವ ಡಾ. ಅಂಬರೀಶ್ ಅವರನ್ನು ಬರ ಮಾಡಿಕೊಳ್ಳುವ ಸಂತೋಷ,ಹೇಳಲಾರದ ಭಾವ.

ಶ್ವಾಸಕೋಶದ ಸೋಂಕಿನಿಂದ ಉಸಿರಾಟದ ತೊಂದರೆ ಎದುರಿಸುತ್ತಿದ್ದ ಹಿರಿಯ ನಟ-ಸಚಿವ ಡಾ. ಅಂಬರೀಶ್ ಅವರು ಇಂದು ನಗರಕ್ಕೆ ಹಿಂತಿರುಗುವುದಲ್ಲದೆ ತಮ್ಮ ಅನುಭವಗಳ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಬರುತ್ತಿದ್ದಾರೆ. ಬೆಂಗಳೂರು ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಅನಾರೋಗ್ಯದ ನಿಮಿತ್ತ ಅಂಬಿ ಅವರ ನ್ನು ದಾಖಲಿಸಲಾಗಿತ್ತು.

ಆದರೆ ಹೆಚ್ಚಿನ ವಿಶ್ರಾಂತಿಗಾಗಿ ಅವರಿಗೆ ಸಿನ್ಗಪೂರ್ನಲ್ಲಿರುವ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಒಳಿತು ಎಂದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಾತಿನಂತೆ ಅಂಬಿ ಅವರನ್ನು ಸಿಂಗಪೂರ್ಗೆ ಕರೆದೊಯ್ಯಲಾಗಿತ್ತು.
webdunia
PR

ಅವರ ಆರೋಗ್ಯ ಅಲ್ಲಿ ಸಂಪೂರ್ಣವಾಗಿ ಸುಧಾರಿಸಿದ್ದು, ಈಗ ಮತ್ತೆ ತಾಯ್ನಾಡಿಗೆ ಬರುತ್ತಿದ್ದಾರೆ. ಮುಖ್ಯವಾಗಿ ಅಂಬಿ ಅವರು ಮಂಡ್ಯಕ್ಕೆ ತೆರಳಿ ರಮ್ಯ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada