Webdunia - Bharat's app for daily news and videos

Install App

ಮಹಾರಾಷ್ಟ್ರದಲ್ಲಿ ಬಸ್ ಕಣಿವೆಗೆ ಬಿದ್ದು 27 ಜನರ ದುರ್ಮರಣ

Webdunia
ಶುಕ್ರವಾರ, 3 ಜನವರಿ 2014 (09:16 IST)
PR
PR
ಥಾನೆ: ರಾಜ್ಯ ಸಾರಿಗೆ ಬಸ್ ಇಂದು ವಿಠಲ್‌ವಾಡಿ-ಅಹ್ಮದಾನಗರ ಮಾರ್ಗದಲ್ಲಿ ಮಲಶೇಜ್ ಘಾಟ್ ಕಣಿವೆಗೆ ಬಿದ್ದು 27 ಜನರು ಸಾವನ್ನಪ್ಪಿದ ಭೀಕರ ದುರಂತ ಸಂಭವಿಸಿದೆ. ಸುಮಾರು 250 ಮೀಟರ್ ಆಳವಿರುವ ಕಣಿವೆಯಲ್ಲಿ ರಕ್ಷಣಾ ತಂಡ ಪರಿಹಾರ ಕಾರ್ಯ ನಡೆಸುತ್ತಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದೆಂದು ಭಾವಿಸಲಾಗಿದೆ. ಟೆಂಪೋವೊಂದು ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಣಿವೆಗೆ ಬಿತ್ತೆಂದು ತಿಳಿದುಬಂದಿದೆ. ಮೃತರಲ್ಲಿ 19 ಮಹಿಳೆಯರು ಮತ್ತು 8 ಮಂದಿ ಪುರುಷರು ಸೇರಿದ್ದಾರೆ. ರಕ್ಷಿಸಲಾದ ಮೂವರ ಸ್ಥಿತಿ ಗಂಭೀರವಾಗಿದೆ.

ಇದುವರೆಗೆ 17 ಜನರನ್ನು ರಕ್ಷಿಸಲಾಗಿದೆ. ಬಸ್ ಕೆಳಕ್ಕೆ ಬಿದ್ದ ರಭಸಕ್ಕೆ ಎರಡು ಚೂರಾಗಿದೆ. ಅಪಘಾತ ಸ್ಥಳದಲ್ಲಿ ಮೊಬೈಲ್ ಟವರ್ ಕೂಡ ಇಲ್ಲದಿದ್ದರಿಂದ ಮೊಬೈಲ್ ಕೂಡ ಕಾರ್ಯನಿರ್ವಹಿಸುತ್ತಿರಲಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ಅಪಘಾತದಲ್ಲಿ ಸತ್ತವರಿಗೆ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments