Webdunia - Bharat's app for daily news and videos

Install App

ಮದುವೆ ಮಂಟಪದಲ್ಲಿ ಮಗುವನ್ನು ಹೆತ್ತ ವಧುವನ್ನು ಕೈಹಿಡಿದ ವರ

Webdunia
ಶನಿವಾರ, 22 ಫೆಬ್ರವರಿ 2014 (20:17 IST)
PR
PR
ಭೂಪಾಲ್: ವಧು ತನ್ನ ವಿವಾಹ ಸಮಾರಂಭದಲ್ಲಿ ಮಗುವಿಗೆ ಜನ್ಮನೀಡಿದಾಗ, ವಧು ಮತ್ತು ವರರ ಬಂಧುಗಳು ಮದುವೆಯನ್ನು ರದ್ದು ಮಾಡಿ ಗಂಟು ಮೂಟೆ ಕಟ್ಟಿದ್ದರು.ಆದರೆ ವರ ಮಾತ್ರ ಮದುವೆ ಸಮಾರಂಭ ಮುಂದುವರಿಸುವಂತೆ ಆದೇಶಿಸಿದ. ಅಷ್ಟೇ ಅಲ್ಲ ವಧು ಮತ್ತು ನವಸಂಜಾತ ಶಿಶುವನ್ನು ಮನೆಗೆ ಕರೆದುಕೊಂಡು ಹೋದ. ಬುಡಕಟ್ಟು ಪ್ರಾಬಲ್ಯದ ದಿಂಡೋರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಧುವಿಗೆ ಮದುವೆ ಸಮಾರಂಭದಲ್ಲೇ ಹೆರಿಗೆ ನೋವು ಆರಂಭವಾಗಿ ಸ್ಥಳದಲ್ಲೇ ಮಗುವನ್ನು ಹೆತ್ತಳು. ಅಲ್ಲಿ ನೆರೆದಿದ್ದ ಅತಿಥಿಗಳಿಗೆ ಮತ್ತು ಬಂಧುಗಳಿಗೆ ಆಘಾತವಾಯಿತು. ವರ ಮಾನ್ ಸಿಂಗ್‌ನನ್ನು ವಿವಾಹವನ್ನು ಬಿಟ್ಟು ಬರುವಂತೆ ಒತ್ತಡ ಹೇರಿದರು.

ಆದರೆ ಪ್ರತಿಯೊಬ್ಬರು ಅಚ್ಚರಿಪಡುವಂತೆಇಂತಹ ಪರಿಸ್ಥಿತಿಯಲ್ಲಿ ಅವಳ ಕೈಬಿಡುವುದಿಲ್ಲ ಎಂದು ಹೇಳಿ ಮಗುವನ್ನು ಕೈಯಲ್ಲಿ ಹಿಡಿದೇ ವಿವಾಹದ ವಿಧಿಗಳನ್ನು ಮುಗಿಸಿದ. ನಾನು ಅವಳ ಜತೆ ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಜೀವಮಾನಪೂರ್ತಿ ಅವಳನ್ನು ಸಾಕುವ ಭರವಸೆ ನೀಡಿದ್ದೆ ಎಂದು ಮಾನ್ ಸಿಂಗ್ ಹೇಳಿದ. ನಂತರ ಪಂಚಾಯಿತಿ ವಿಧಿಸಿದ ದಂಡವನ್ನು ವರ ಪಾವತಿ ಮಾಡಿದ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments