Webdunia - Bharat's app for daily news and videos

Install App

ತಾಳಿ ಕಿತ್ತು ವರನ ಕೈಗಿಟ್ಟು ಬಾಯ್`ಫ್ರೆಂಡ್ ಜೊತೆ ವಧು ಎಸ್ಕೇಪ್..!

Webdunia
ಸೋಮವಾರ, 31 ಜುಲೈ 2017 (14:56 IST)
ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಧು ತಾಳಿ ಕಿತ್ತು ವರನ ಕೈಯಲ್ಲಿಟ್ಟು ಲವರ್ ಜೊತೆ ಹೋಗಿರುವ ಘಟನೆ ಕೇರಳದ ಪ್ರಸಿದ್ಧ ಗುರುವಾಯೂರ್ ದೇಗುಲದಲ್ಲಿ ನಡೆದಿದೆ ಎಂದು ವರದಿಯಾಗಿದೆ.
 

ಜುಲೈ 30ರಂದು ಈ ಘಟನೆ ನಡೆದಿದ್ದು, ತ್ರಿಶೂರ್ ಮುಲ್ಲಾಸ್ಸೆರಿ ಮೂಲದ ವಧು ಈ ಕೃತ್ಯ ಎಸಗಿದ್ದಾಲೆ. ಯಾವುದೇ ಅಡೆತಡೆಯಿಲ್ಲದೆ ಮದುವೆ ಸರಾಗವಾಗಿ ನಡೆದಿತ್ತು. ಮದುವೆ ಸೊಲ್ಲೆತ್ತದ ವಧು ತಲೆ ಬಗ್ಗಿಸಿ ತಾಳಿ ಕಟ್ಟಿಸಿಕೊಂಡಿದ್ದಳು. ಮದುವೆ ಬಳಿಕ ವಧು-ವರರಿಬ್ಬರು ದೇವರ ದರ್ಶನಕ್ಕೆ ತೆರಳಿದಾಗ ಭಕ್ತರ ಸಾಲಿನಲ್ಲಿ ತನ್ನ ಲವರ್ ಇರುವುದನ್ನ ಗಮನಿಸಿದ್ದಾಳೆ. ಒಂದೇ ಕ್ಷಣದಲ್ಲಿ ಆತನ ಜೊತೆ ತೆರಳಲು ನಿರ್ಧರಿಸಿದ ವಧು, ತಾಳಿ ಕಿತ್ತು ವರನ ಕೈಗೆ ಕೊಟ್ಟಿದ್ದಾಳೆ. ವರನ ಸಂಬಂಧಿಕರು ಎಷ್ಟೇ ಪ್ರಯತ್ನಪಟ್ಟರೂ ವಧುವಿನ ಮನವೊಲಿಸಲು ಸಾಧ್ಯವಾಗಲಿಲ್ಲ.

ತನ್ನ ಪ್ರೀತಿ ಕುರಿತಂತೆ ವಧು, ವರನಿಗೆ ಮೊದಲೇ ತಿಳಿಸಿದ್ದಳೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಘಟನೆ ಹಿನ್ನೆಲೆಯಲ್ಲಿ ವಧು-ವರರ ಕುಟುಂಬಗಳ ನಡುವೆ ದೊಡ್ಡ ಗಲಭೆಯೇ ನಡೆದಿದೆ. ಪೊಳಿಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ಧಾರೆ. ವರನ ಕಡೆಯವರು 15 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments