Select Your Language

Notifications

webdunia
webdunia
webdunia
webdunia

ಭುಟ್ಟೊ ಹತ್ಯೆ: ರಾಷ್ಟ್ರಪತಿ ವಿಷಾಧ

ಭುಟ್ಟೊ ಹತ್ಯೆ: ರಾಷ್ಟ್ರಪತಿ ವಿಷಾಧ
ನವದೆಹಲಿ , ಶುಕ್ರವಾರ, 28 ಡಿಸೆಂಬರ್ 2007 (09:15 IST)
ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೊ ಅವರ ಹತ್ಯೆಯನ್ನು ಖಂಡಿಸಿರುವ ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ ಶೇಖಾವತ್ ಅವರು ಮಾಜಿ ಮಹಿಳಾ ಪ್ರದಾನಿಯ ಅಕಾಲಿಕ ನಿದನ, ಉಪಖಂಡಕ್ಕೆ ಭರಿಸಲಾಗದ ನಷ್ಟ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.


ಪಾಕಿಸ್ತಾನ ಜನತೆಗೆ ಕಳುಹಿಸಿರುವ ವಿಷಾಧ ಸಂದೇಶದಲ್ಲಿ ಬೇನಜಿರ್ ಭುಟ್ಟೊ ಅವರ ಹತ್ಯೆ ಸುಶಿಕ್ಷಿತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು. ಇಂದು ಹರಡಿರುವ ಭಯೋತ್ಪಾದನೆಯು ಸಮಾಜದ ಪಾಲಿಗೆ ಕಂಟಕರವಾಗಿದೆ. ಪ್ರಬುದ್ಧ ರಾಜಕೀಯ ನಾಯಕಿಯನ್ನು ಕಳೆದುಕೊಂಡಿರುವ ಪಾಕಿಸ್ತಾನದ ವೇದನೆ ತಮಗೆ ಅರ್ಥವಾಗುತ್ತದೆ. ಈ ಸಂಕಷ್ಟದ ಸಮಯದಲ್ಲಿ ನಾವು ತಮ್ಮೊಂದಿಗೆ ಇದ್ದೇವೆ ಎಂದು ಅಂಡಮಾನ್ ನಿಕೊಬಾರ್ ದಿಂದ ಕಳುಹಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada