ಬೆಳ್ಳಿಯ ಬಳೆಗಾಗಿ 70 ವರ್ಷದ ವೃದ್ಧೆಯ ಕೈ ಕತ್ತರಿಸಿದ ಕಳ್ಳರು
ಲಕ್ನೋ , ಶುಕ್ರವಾರ, 29 ನವೆಂಬರ್ 2013 (13:21 IST)
ಉತ್ತರಪ್ರದೇಶದ ಬಂಡಾ ಜಿಲ್ಲೆಯಲ್ಲಿ ಕಳ್ಳರ ಗುಂಪೊಂದು 70 ವರ್ಷ ವಯಸ್ಸಿನ ವೃದ್ಧೆಯನ್ನು ಹತ್ಯೆ ಮಾಡಿ ಬೆಳ್ಳಿಯ ಆಭರಣಗಳಿಗಾಗಿ ಕೈಯನ್ನೇ ಕತ್ತರಿಸಿದ ದಾರುಣ ಘಟನೆ ವರದಿಯಾಗಿದೆ. ಬಂಡಾ ಜಿಲ್ಲೆಯ ಬರೇಡಾ ಗ್ರಾಮದ ವೃದ್ಧೆ ಅಮ್ರಾತಿಯಾ ಮನೆಯಲ್ಲಿ ಏಕಾಂಗಿಯಾಗಿರುವಾಗ ಕನ್ನ ಹಾಕಿದ ಕಳ್ಳರ ಗುಂಪು, ಇಂತಹ ಹೇಯ ಕೃತ್ಯ ಎಸಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.