ಬಿಜೆಪಿ ಕಿರಣ್ ಖೇರ್ ಅವರನ್ನು ಚಂಡೀಗಡ್ನ ಅಭ್ಯರ್ಥಿಯನ್ನಾಗಿ ಘೋಷಿಸಿದ ಕಾರಣಕ್ಕೆ ಅತ್ರಪ್ತರಾಗಿರುವ ಪಕ್ಷದ ಕಾರ್ಯಕರ್ತರು ಪಕ್ಷದ ಪ್ರಧಾನ ಕಚೇರಿಗೆ ಅವರು ಆಗಮಿಸಿದ ಸಂದರ್ಭದಲ್ಲಿ "ಕಿರಣ್ ಖೇರ್ ಹಿಂತಿರುಗಿ" ಎಂಬ ಘೋಷಣೆಗಳನ್ನು ಕೂಗಿ ಉದ್ರಿಕ್ತ ವಾತಾವರಣ ಸೃಷ್ಟಿಸಿದರು.
ಚಂಡೀಗಡ್ದ ಬಿಜೆಪಿ ಅಧ್ಯಕ್ಷ ಸಂಜಯ್ ಟಂಡನ್, ಮಾಜಿ ಸಂಸದ ಸತ್ಯ ಪಾಲ್ ಜೈನ್ ಮತ್ತು ಮಾಜಿ ಕೇಂದ್ರ ಸಚಿವ ಹರಮೋಹನ್ ಧವನ್ ರಂತಹ ಸ್ಥಳೀಯ ನಾಯಕರು ಈ ಕ್ಷೇತ್ರದಿಂದ ಸ್ಪರ್ಧಿಸಲು ಯೋಜಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಆ ಕ್ಷೇತ್ರದಲ್ಲಿ ಕಿರಣ್ ಖೇರ್ ಗೆ ಟಿಕೆಟ್ ನೀಡಿದ್ದರಿಂದ ಆಕ್ರೋಶ ಎದುರಾಗಿದೆ. ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಧವನ್ ಬೆಂಬಲಿಗರಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.