Webdunia - Bharat's app for daily news and videos

Install App

ಬಸವಳಿದ ಪ್ರತಿಭಟನಾಕಾರರಿಗೆ ಬಾರ್ ಬಾಲೆಯರ 'ಉಪಚಾರ'

Webdunia
ಸೋಮವಾರ, 14 ಮಾರ್ಚ್ 2011 (12:41 IST)
ಸರಕಾರಗಳ ಗಮನ ಸೆಳೆಯಲು ನಡೆಸುತ್ತಿರುವ ಪ್ರತಿಭಟನೆಗಳು ವಿಚಿತ್ರ ತಿರುವು ಪಡೆಯುತ್ತಿರುವುದು ಹೊಸತೇನಲ್ಲ. ಪ್ರತಿಭಟನೆಯ ಹೆಸರಿನಲ್ಲಿ ಮೋಜು-ಗೌಜಿ ಮಾಡುವುದು, ಕುಣಿದು ಕುಪ್ಪಳಿಸುವುದು, ಚೆಂಡೆ-ವಾದ್ಯ ಬಾರಿಸುವುದು-ನುಡಿಸುವುದು ಮುಂತಾದುವುಗಳನ್ನು ನೋಡಿದ್ದೇವೆ. ಈಗ ಬಾರ್ ಬಾಲೆಯರ ಜತೆಗಿನ ಕುಣಿತವೂ ಇದಕ್ಕೆ ಸೇರ್ಪಡೆಗೊಂಡಿದೆ. ಅದು ಪ್ರತಿಭಟನಾಕಾರರ ಸುಸ್ತನ್ನು ಹೋಗಲಾಡಿಸಲು ಎನ್ನುವುದು ಮತ್ತೊಂದು ವಿಶೇಷ!

ಇದು ನಡೆದಿರುವುದು ಉತ್ತರ ಪ್ರದೇಶದ ಅಮೋರಾ ಜಿಲ್ಲೆಯಲ್ಲಿ. ಉತ್ತರ ರೈಲ್ವೆಯಲ್ಲಿ ಕೇಂದ್ರ ಸರಕಾರವು ಜಾತ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಕಳೆದ ಹತ್ತು ದಿನಗಳಿಂದ ಮೊರದಾಬಾದ್-ದೆಹಲಿ ರೈಲು ನಿಲ್ದಾಣದಲ್ಲಿ ಆ ಸಮುದಾಯದ ಮಂದಿ ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಬಾರ್ ಹುಡುಗಿಯರು ಮನರಂಜನೆ ನೀಡುತ್ತಿದ್ದಾರೆ. ತಮ್ಮ ವಯ್ಯಾರ ಭರಿತ ಕುಣಿತದ ಮೂಲಕ ಸುಸ್ತಾದವರನ್ನು ತಣಿಸುತ್ತಿದ್ದಾರೆ.

ಜಾತ್ ಸಮುದಾಯದವರು ರೈಲು ಹಳಿಗಳ ಮೇಲೆಯೇ ತಮ್ಮ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲೇ ಅಡುಗೆ ಮಾಡುತ್ತಿದ್ದಾರೆ, ಮಲಗುತ್ತಿದ್ದಾರೆ. ಜಾತ್ ಮಹಿಳೆಯರು ರೈಲು ಹಳಿಗಳ ಮೇಲೆಯೇ ಕಾವಲಿಯಿಟ್ಟು ಚಪಾತಿ ಮಾಡುತ್ತಿದ್ದರೆ, ಪುರುಷರು ಆರಾಮವಾಗಿ ಹುಕ್ಕಾ ಸೇದುತ್ತಿದ್ದಾರೆ.

ತಮ್ಮ ಜಾನುವಾರುಗಳನ್ನು ಕೂಡ ರೈಲ್ವೆ ಹಳಿಗಳಿಗೆ ಅವರು ಕಟ್ಟಿದ್ದಾರೆ. ಈ ಪ್ರತಿಭಟನೆಗೆ ಭಾನುವಾರ ಒಂಬತ್ತು ದಿನ ತುಂಬಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವಾಗಲಿ, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯಾಗಲಿ ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳೂ ತೋರಿಸುತ್ತಿವೆ. ಈ ನಡುವೆ ನಡೆದ ಆವಾಂತರ ಬಾರ್ ಬಾಲೆಯರ ಕುಣಿತ.

ಪ್ರತ್ಯಕ್ಷದರ್ಶಿಗಳು ಮತ್ತು ಇತರರ ಪ್ರಕಾರ, ಬಾರ್ ಬಾಲೆಯರ ನೃತ್ಯ ಮತ್ತು ಹಾಡುಗಳ ಕಾರ್ಯಕ್ರಮಗಳನ್ನು ಆಯೋಜಿಸಿರುವುದರ ಹಿಂದಿನ ಉದ್ದೇಶ, ಪ್ರತಿಭಟನಾಕಾರರನ್ನು ರಂಜಿಸುವುದು. ಅದರಲ್ಲೂ ಹಲವು ದಿನಗಳ ಕಾಲ ಯುವಕರನ್ನು ಪ್ರತಿಭಟನಾ ಸ್ಥಳದಲ್ಲಿ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿರುವುದರಿಂದ ಹೀಗೆ ಮಾಡಲಾಗಿದೆಯಂತೆ.

ಪ್ರತಿಭಟನಾಕಾರರು ಸ್ಥಳ ಬಿಟ್ಟು ಹೋಗಬಾರದು. ಪ್ರತಿಭಟನಾಕಾರರ ಸಾಮರ್ಥ್ಯ ಕುಗ್ಗಬಾರದು. ಸಂಖ್ಯಾಬಲ ಕಡಿಮೆಯಾಗಬಾರದು. ಆ ಕಾರಣಕ್ಕಾಗಿ ಬಾರ್ ಬಾಲೆಯರನ್ನು ಕರೆಸಿ ಕುಣಿಸಲಾಗುತ್ತಿದೆ. ಜಾನಪದ ಗೀತೆಗಳನ್ನು ಕೂಡ ಇಲ್ಲಿ ಸ್ಥಳೀಯ ಹಾಡುಗಾರರು ಹಾಡುತ್ತಾರೆ. ದೇಸೀ ಸಂಗೀತ ಪರಿಕರಗಳನ್ನು ಬಳಸಿ ಈ ರಂಜನೆ ನೀಡಲಾಗುತ್ತದೆ ಎಂದು ಇನ್ನು ಕೆಲವರು ಹೇಳಿಕೊಂಡಿದ್ದಾರೆ.

ತಮ್ಮ ಪ್ರತಿಭಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ, ಇನ್ನಷ್ಟು ಅತಿರೇಕದ ಅಸ್ತ್ರಗಳು ತಮ್ಮಲ್ಲಿವೆ. ದೆಹಲಿಗೆ ಹಾಲು ಕಳುಹಿಸುವುದಿಲ್ಲ, ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಈ ನಡುವೆ ಪ್ರತಿಭಟನಾಕಾರರಿಂದ ಬೆದರಿಕೆಯೂ ಬಂದಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಸ್ಮಾ ಜಾರಿ ಮಾಡಿದ್ರೂ ಹೆದರಲ್ಲ: ಆ.5ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜಗದೀಪ್ ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಹುದ್ದೆಯ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಆಯೋಗ

ಧರ್ಮಸ್ಥಳ ಪ್ರಕರಣ: ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ 20 ಪೊಲೀಸ್ ಅಧಿಕಾರಿಗಳ ನಿಯೋಜನೆ

ಬಾ ನಲ್ಲ ಮಧುಚಂದ್ರಕೆ ಪ್ರಕರಣ: ಪತಿ ಕೊಂದು ಜೈಲು ಸೇರಿದ್ದ ಸೋನಂ ನಡವಳಿಕೆಗೆ ಶಾಕ್

ಸುಳ್ಳು, ವಂಚನೆ ಮಾಡೋದೇ ಕಾಂಗ್ರೆಸ್ ಸರ್ಕಾರದ ಕೆಲಸ: ಛಲವಾದಿ ನಾರಾಯಣಸ್ವಾಮಿ

Show comments