Webdunia - Bharat's app for daily news and videos

Install App

ಪಾರ್ಕಿಂಗ್ ಸಮಸ್ಯೆ: ಲಾರಿ ನಿಲ್ಲಿಸಲು ಗುಡ್ಡ ಕಡಿದ ಗ್ರಾಮಸ್ಥ!

Webdunia
ಮಂಗಳವಾರ, 1 ಡಿಸೆಂಬರ್ 2009 (14:27 IST)
ತನ್ನ ಮನೆಮುಂದಿರುವ ಕಲ್ಲುಬಂಡೆಯಾವೃತ ಗುಡ್ಡವನ್ನು ಕಳೆದ 14 ವರ್ಷಗಳಿಂದ ಕಡಿದ ವ್ಯಕ್ತಿಯೊಬ್ಬರು ಕೊನೆಗೂ ಇಲ್ಲಿ ತನ್ನ ಲಾರಿ ನಿಲ್ಲಿಸಲು ಜಾಗ ಮಾಡಿಕೊಂಡಿದ್ದಾರೆ.

" ನನ್ನ ಮನೆಯ ದಾರಿಗೆ ಗುಡ್ಡ ಅಡ್ಡವಿದ್ದ ಕಾರಣ ನಾನು ನನ್ನ ಮನೆಯ ಮುಂದೆ ಟ್ರಕ್ ನಿಲ್ಲಿಸಲಾಗುತ್ತಿರಲಿಲ್ಲ" ಎಂಬುದಾಗಿ 53ರ ಹರೆಯದ ರಾಮಚಂದ್ರ ದಾಸ್ ಹೇಳುತ್ತಾರೆ. ಅವರು ಪೂರ್ವ ಬಿಹಾರದ ಗಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ.

ಸ್ಥಳೀಯ ಪ್ರಾಧಿಕಾರವು ತನಗೆ ಸಹಾಯ ಮಾಡಲು ನಿರಾಕರಿಸಿದ ಬಳಿಕ ದಾಸ್ ತನ್ನಷ್ಟಕ್ಕೆ ಗುಡ್ಡ ಅಗೆಯಲು ಆರಂಭಿಸಿದ್ದರು. ತನ್ನ ಟ್ರಕ್ ಅನ್ನು ಕಳ್ಳರು ಕದಿಯಬಹುದೆಂಬ ಭೀತಿಯೇ ಈ ಸಾಹಸಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ನಾನು ಟ್ರಕ್ಕನ್ನು ಮೈಲಿಗಟ್ಟಲೆ ದೂರ ನಿಲ್ಲಿಸಿ ಬರಬೇಕಿತ್ತು. ಅದಕ್ಕಾಗಿ ನಾನೇ ಏನಾದರೂ ಮಾಡಬೇಕೆಂದು ಈ ಕಾರ್ಯಕ್ಕೆ ಮುಂದಾದೆ ಎಂದು ದಾಸ್ ಹೇಳುತ್ತಾರೆ.

ಇದೀಗ ಸುರಂಗ ತೋಡಿರುವ ದಾಸ್ ಮೇಲೆ ಗ್ರಾಮಸ್ಥರಿಗೂ ತುಂಬ ಮೆಚ್ಚುಗೆ. ಬಂಡೆಯಿಂದಾಗಿ ಸುತ್ತುಬಳಸಿ ತಮ್ಮ ತೋಟಕ್ಕೆ ಸಾಗುತ್ತಿದ್ದ ಸ್ಥಳೀಯರು ಇದೀಗ ಈ 14 ಅಡಿ ಸುರಂಗ ಬಳಸಿ ಸಾಗುವ ಮೂಲಕ ಹಾದಿ ಸಮೀಪವಾಗಿದೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments