ನವದೆಹಲಿ : ಹಿಂದೂಸ್ಥಾನದ ಪ್ರಧಾನ ಮಂತ್ರಿ ದೆಹಾದಿ ಸ್ತ್ರೀಯಂತಿದ್ದಾರೆ (ಹಳ್ಳಿಯ ಹೆಣ್ಣಿನಂತೆ ಇದ್ದಾರೆ) ಎಂದು ಪಾಕಿಸ್ಥಾನದ ನವಾಜ್ ಶರೀಫ್ ಮನಮೋಹನ್ ಸಿಂಗ್ ಅವರನ್ನು ಅವಮಾನಿಸಿದ್ದಾರೆ. ಭಾರತದ ಪ್ರಧಾನಿಗೆ ಆದ ಅವಮಾನ ಹಿಂದೂಸ್ಥಾನಕ್ಕೆ ಆದ ಅವಮಾನವಾಗಿದೆ. ಪ್ರಧಾನ ಮಂತ್ರಿಯನ್ನು ಈ ರೀತಿಯ ಅವಮಾನ ಮಾಡಿದ್ದು ನಾನು ಸಹಿಸುವುದಿಲ್ಲ ಎಂದು ಮೋದಿ ಆರ್ಭಟಿಸಿದ್ದಾರೆ.
ಪಾಕ್ ಪ್ರಧಾನಿ ನವಾಜ್ ಶರೀಫ್ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಾದಿ ಸ್ತ್ರೀ (ಹಳ್ಳಿಯ ಹೆಣ್ಣು) ಎಂದು ಕರೆದರೂ ಅವರು ಮಿಠಾಯಿ ತಿನ್ನುತ್ತಿದ್ದರಂತೆ. ಸ್ವಾಭಿಮಾನಿಯಾದ ಭಾರತೀಯ ಬಿಸ್ಕೇಟನ್ನು ಪಾಕ್ ಪ್ರಧಾನಿಯ ಮುಖದ ಮೇಲೆ ಬಿಸಾಕಿ ದಿಟ್ಟ ಉತ್ತರವನ್ನು ನೀಡಿ ಎದ್ದು ಬರುತ್ತಿದ್ದರು. ಆದ್ರೆ ಭಾರತದ ಪ್ರಧಾನಿ ಇಂದಿಗೂ ಮೌನವಾಗಿಯೇ ಇದ್ದಾರೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನನ್ನ ದೇಶವನ್ನು ಅವಮಾನ ಮಾಡುವುದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಯಾರೊಬ್ಬರೂ ನ್ನ ದೇಶದತ್ತ ಬೆರಳು ತೋರಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಮೋದಿ ಖಡಕ್ ಆಗಿ ಹೇಳಿದ್ರು.
ಅಷ್ಟೆ ಅಲ್ಲ, ಸ್ವತಃ ಅವರ ಪಕ್ಷದ ರಾಹುಲ್ ಗಾಂಧಿಯೇ ಪ್ರಧಾನಿಯನ್ನು ನಾನ್ಸೆನ್ಸ್ ಎಂದು ಕರೆದಿರುವಾಗ ಪಾಕಿಸ್ಥಾನದ ಪ್ರಧಾನಿ ಹೇಗೆ ಮರ್ಯಾದೆ ಕೊಡ್ತಾನೆ? ಎಂದು ವಿಷಾದ ವ್ಯಕ್ತಪಡಿಸಿದರು. ದೇಶದ ಗೌರವವನ್ನು ಕಾಪಾಡಲಾಗದ ಇಂತಹ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಿರಿ ಎಂದು ಜನತೆಗೆ ಕರೆ ಕೊಟ್ಟರು ಮೋದಿ.