ದೆಹಲಿ ರೇಪ್ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದೆ. ಆದರೆ, ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಯಿಲ್ಲದಂತಾಗಿದೆ. ಪತ್ನಿಯ ಅನೈತಿಕ ಸಂಬಂಧ ಶಂಕಿಸಿದ ಪತಿಯೊಬ್ಬ ಆಕೆಯ ಗುಪ್ತಾಂಗವನ್ನು ಕತ್ತರಿಸಿ ಹಾಕಿದ ಹೇಯ ಘಟನೆ ವರದಿಯಾಗಿದೆ.
ಭುವನೇಶ್ವರ್ನ ಜಗಮಾರಾ ಜಿಲ್ಲೆಯ ನಿವಾಸಿಯಾಗಿದ್ದ ಪತಿ ರಂಜನ್ ಪಾಂಡಾ ಪತ್ನಿ ಜಾಸೋಡಾ ನಡತೆ ಸಂಶಯಸಿ ಬ್ಲೇಡ್ನಿಂದ ಆಕೆಯ ಗುಪ್ತಾಂಗವನ್ನು ಕತ್ತರಿಸಿ ನಂತರ ಒಡೆದ ಟ್ಯೂಬ್ಲೈಟ್ನಿಂದ ಹೊಟ್ಟೆಗೆ ತಿವಿದು ರಾಕ್ಷಸಿ ಕೃತ್ಯವನ್ನು ಮೆರೆದಿದ್ದಾನೆ,
ಪತ್ನಿಯ ದೂರಿನ ಮೇರೆಗೆ ಪೊಲೀಸರು ಆರೋಪಿ ಪಾಂಡಾನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
PR
ಅಂದು ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದ ಪತಿ ರಂಜನ್ ಪಾಂಡಾ, ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಲ್ಲದೇ ನನ್ನ ಗುಪ್ತಾಂಗವನ್ನು ಬ್ಲೇಡ್ನಿಂದ ಕತ್ತರಿಸಿ ಟ್ಯೂಬ್ಲೈಟ್ನಿಂದ ಹೊಟ್ಟೆಗೆ ತಿವಿದಿದ್ದಾನೆ. ರಕ್ತ ಸ್ರಾವವಾಗಿ ಕಿರುಚುತ್ತಿದ್ದರು ಯಾರು ನನ್ನ ನೆರವಿಗೆ ಬರಲಿಲ್ಲ. ಪತಿಯ ತಾಯಿ ಮತ್ತು ಪತಿಯ ಸಹೋದರ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನಗಳ ನಂತರ ನನ್ನ ನೋವು ನಿಧಾನವಾಗಿ ಗುಣವಾಗುತ್ತಿತ್ತು. ಮನೆಗೆ ಮರಳಿದ ನಂತರ ಪತಿ ಮಹಾಶಯ ಸೆಕ್ಸ್ನಲ್ಲಿ ಪಾಲ್ಗೊಳ್ಳುವಂತೆ ಮತ್ತೆ ಒತ್ತಾಯಿಸಿದ. ಬೇಡವೆಂದರೂ ಕೇಳದೆ ಸಂಭೋಗಿಸಿದ್ದರಿಂದ ಮತ್ತೆ ಗಾಯ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಪತ್ನಿ ಜಾಸೋಡಾ ತನ್ನ ಸಹೋದರನ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾಳೆ.
ಖಾಂದಾಗಿರಿ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ದೂರು ನೀಡಲು ತೆರಳಿದಾಗ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಲ್ಲದೇ ಅನುಚಿತವಾಗಿ ವರ್ತಿಸಿದರು. ತುಂಬಾ ಬೇಡಿಕೊಂಡ ನಂತರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಪತ್ನಿ ಜಾಸೋಡಾ ಹೇಳಿದ್ದಾರೆ.