Select Your Language

Notifications

webdunia
webdunia
webdunia
webdunia

ಪತ್ನಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ಅಮಾಯಕ ಪತಿ

ಪತ್ನಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ಅಮಾಯಕ ಪತಿ
ಮುಂಬೈ , ಬುಧವಾರ, 15 ಫೆಬ್ರವರಿ 2012 (11:37 IST)
ಪತ್ನಿಯೊಂದಿಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿಯನ್ನು ರೈಲಿಗೆ ತಳ್ಳಿ ಕೊಲೆ ಮಾಡಿದ ಪ್ರಿಯಕರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದಹಿಸಾರ್ (ಪಶ್ಚಿಮ) ಕಂದರಪಾಡಾ ಪ್ರದೇಶದಲ್ಲಿ ಬಾಬು ಸಾಲ್ಕರ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆತನೊಂದಿಗೆ ಅನಧಿಕೃತವಾಗಿ ಮದ್ಯ ಮಾರುತ್ತಿದ್ದ ವ್ಯಕ್ತಿ ಮಂಗೇಶ್ ಸಾಲ್ಕರ್ ಎನ್ನುವ ವ್ಯಕ್ತಿಯೇ ಪತ್ನಿಯ ಪ್ರಿಯಕರ. ಉಭಯರ ನಡುವೆ ಅನೈತಿಕ ಸಂಬಂಧವಿದೆ ಎನ್ನುವ ಸುಳಿವು ಗೊತ್ತಾಗಿದ್ದರಿಂದ ಬಾಬು ಸಾಲ್ಕರ್ ಕೆಂಡಾಮಂಡಲವಾಗಿದ್ದ.

ಒಂದು ದಿನ ಬಾಬು ಮನೆಯಿಂದ ಹೊರಗಡೆ ಹೋದಾಗ ಮನೆಗೆ ಬಂದ ಮಂಗೇಶ್, ಬಾಬು ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ. ಕಾಮಾತುರದಲ್ಲಿ ಸಂಪೂರ್ಣ ಬೆತ್ತಲೆಯಾಗಿ ಸುಖ ಅನುಭವಿಸುತ್ತಿರುವಾಗ ಬಾಬು ಮನೆಗೆ ಮರಳಿದ್ದಾನೆ. ಇಬ್ಬರನ್ನು ನೋಡಿ ಆಕ್ರೋಶಗೊಂಡು ಥಳಿಸಿ ಸುಮ್ಮನಾಗಿದ್ದಾನೆ. ಆದರೆ, ಅನೈತಿಕ ಸಂಬಂಧ ಮತ್ತೆ ಮುಂದುವರಿದಾಗ ಇದಕ್ಕೊಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡ ಬಗ್ಗೆ ಬಾಬು, ಫೆಬ್ರವರಿ 5 ರಂದು ಮಂಗೇಶ್‌ನೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ. ಇಬ್ಬರ ನಡುವೆ ಬಿಸಿ ಬಿಸಿ ಚರ್ಚೆ ನಡೆದಾಗ ಮಂಗೇಶ್ ತನ್ನ ಪ್ರಿಯತಮೆಯ ಗಂಡ ಬಾಬುನನ್ನು ಹತ್ಯೆಗೈಯಲು ಸ್ಕೇಚ್ ಹಾಕಿದ

ರೈಲು ಹಳಿಗಳ ಬಳಿ ನಿಂತಿದ್ದ ಬಾಬು ಮತ್ತು ಮಂಗೇಶ್ ಮಧ್ಯೆ ಕೈಕೈ ಮಿಲಾಯಿಸುವ ಸ್ಥಿತಿ ಎದುರಾಗಿತ್ತು. ಎದುರಲ್ಲಿ ರೈಲು ಬರುತ್ತಿರುವುದನ್ನು ಕಂಡ ಮಂಗೇಶ್, ಬಾಬುನನ್ನು ರೈಲಿನ ಮುಂದೆ ತಳ್ಳಿದ. ರೈಲಿನ ಮುಂದೆ ಬಿದ್ದ ಬಾಬು ಕ್ಷಣಮಾತ್ರದಲ್ಲೇ ಸಾವನ್ನಪ್ಪಿದ. ಮಂಗೇಶ್ ತನ್ನ ಇಬ್ಬರು ಗೆಳೆಯರಾದ ಸಂತೋಷ್ ಭೋಯಿರ್ ಮತ್ತು ಮಾರುತಿ ಜನ್ನಾಹಾಲೆ ಅವರನ್ನು ಕರೆಸಿಕೊಂಡು ಬಾಬುನ ಮೃತದೇಹವನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಎಸೆದು ಮರಳಿದ್ದಾರೆ.

ಕೆಲವು ದಿನಗಳಿಂದ ಬಾಬು ಮನೆಗೆ ಮರಳದಿರುವುದನ್ನು ಆತನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

Share this Story:

Follow Webdunia kannada