ಅಖಿಲೇಶ್ ಯಾದವ್ ಸಂಪುಟದ ಸಚಿವರು ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಉತ್ತರಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಚಿತ್ತರಂಜನ್ ಸ್ವರೂಪ್ ಮುಜಫರ್ನಗರದ ಬರ್ತ್ಡೇ ಪಾರ್ಟಿಯಲ್ಲಿ ಯುವತಿಯ ನೃತ್ಯಪ್ರದರ್ಶನ ವೀಕ್ಷಿಸುತ್ತಾ ಮೋಜು, ಮಸ್ತಿಯಲ್ಲಿ ತೊಡಗಿರುವ ವಿಡಿಯೋ ದೃಶ್ಯಗಳು ಬಯಲಾಗಿವೆ. ಸಚಿವರು ನೃತ್ಯವನ್ನು ವೀಕ್ಷಿಸುತ್ತಾ ಭೇಷ್ ಎನ್ನುತ್ತಿದ್ದರೆ ಸಚಿವರ ಸಂಗಡಿಗರು ನೃತ್ಯಪ್ರದರ್ಶನ ನೀಡುತ್ತಿದ್ದ ಯುವತಿಯ ಮೇಲೆ ನೋಟುಗಳನ್ನು ಚೆಲ್ಲುತ್ತಾ ಆನಂದಿಸುತ್ತಿದ್ದರು.
ಒಂದು ಕಡೆ ಮುಜಫರ್ನಗರ ಸಂತ್ರಸ್ಥರು ಅನ್ನ, ನೀರಿಲ್ಲದೇ ಸೊರಗಿದ್ದರೆ ಇನ್ನೊಂದು ಕಡೆ ಸಚಿವರು ಮುಜಫರ್ನಗರದಲ್ಲೇ ಮೋಜು, ಮಸ್ತಿಯಲ್ಲಿ ತೊಡಗುವುದು ವಿಪರ್ಯಾಸವಾಗಿದೆ.