ನಾನು ನರೇಂದ್ರ ಮೋದಿಯನ್ನು ಭೇಟಿಯಾದುದ್ದರಲ್ಲಿ ತಪ್ಪೆನಿದೆ : ಶರದ್ ಪವಾರ್
ನವದೆಹಲಿ , ಸೋಮವಾರ, 10 ಫೆಬ್ರವರಿ 2014 (09:02 IST)
ಕೇಂದ್ರ ಕೃಷಿ ಮಂತ್ರಿ ಶರದದ ಪವಾರ್ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಮತ್ತು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಗೌಪ್ಯವಾಗಿ ಭೇಟಿಯಾಗಿದ್ದಾರೆ ಎಂಬ ಸುದ್ದಿಯೊಂದು ಹೊರಬಂದಿತ್ತು , ಈ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಠಾಣೆಯಲ್ಲಿ ನಡೆದ ಸಮಾರಂಭದಲ್ಲಿ ತಾವು ಮೋದಿಯನ್ನು ಭೇಟಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ನಾನು ಪಾಕಿಸ್ತಾನ ಅಥವಾ ಚೀನಾದ ಮುಖಂಡರ ಜೊತೆಗೆನು ಮಾತುಕತೆ ನಡೆಸಿಲ್ಲ ನಾನು ಭಾರತದ ಗುಜರಾತ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆನೆ. ನಾನು ಒಬ್ಬ ಕೃಷಿ ಮಂತ್ರಿ . ಕೇಂದ್ರದ ಮಂತ್ರಿಯಾದ ನಾನು ರಾಜ್ಯಗಳ ಮುಖ್ಯ ಮಂತ್ರಿಯನ್ನು ಭೇಟಿಯಾಗುತ್ತೆನೆ. ಇದರಲ್ಲಿ ತಪ್ಪೆನಿದೆ ಎಂದು ಶರದದ ಪವಾರ್ ತಿಳಿಸಿದ್ದಾರೆ.ಕೆಲವು ದಿನಗಳ ಹಿಂದೆ ಶರದದ ಪವಾರ್ ಜನೆವರಿ 17ರಂದು ನರೇಂದ್ರಮೋದಿಯವರನ್ನು ಗೌಪ್ಯವಾಗಿ ಭೇಟಿಯಾಗಿದ್ದರೆಂದು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿ ಕುರಿತು ಶರದದ ಪವಾರ್ ಸ್ಪಷ್ಟಿಕರಣ ನೀಡಿದ್ದಾರೆ.