Select Your Language

Notifications

webdunia
webdunia
webdunia
webdunia

ನಾನು ಜೈಲಿಂದ ಬಿಡುಗಡೆಯಾಗಬೇಕು ಅಂತ ದೇವ್ರಲ್ಲಿ ಪ್ರಾರ್ಥಿಸಿ : ಸಂಜಯ್‌ದತ್

ನಾನು ಜೈಲಿಂದ ಬಿಡುಗಡೆಯಾಗಬೇಕು ಅಂತ ದೇವ್ರಲ್ಲಿ ಪ್ರಾರ್ಥಿಸಿ : ಸಂಜಯ್‌ದತ್
ಮುಂಬೈ , ಬುಧವಾರ, 30 ಅಕ್ಟೋಬರ್ 2013 (12:19 IST)
PTI
PTI
ನಾನು ಇಂದು ಮತ್ತೆ ವಾಪಸ್‌ ಜೈಲಿಗೆ ಹೋಗುತ್ತಿದ್ದೇನೆ. ನಾನು ಜೈಲಿನಿಂದ ಆದಷ್ಟು ಬೇಗ ಬಿಡುಗಡೆಯಾಗುವಂತೆ ನೀವೆಲ್ಲರೂ ಆ ದೇವರಲ್ಲಿ ಪ್ರಾರ್ಥನೆ ಮಾಡಿ. ನನ್ನ ಕಾಲಿನ ಗಾಯ ಇನ್ನು ವಾಸಿಯಾಗಿಲ್ಲ ಆದ್ರೆ ನಿಮ್ಮೆಲ್ಲರನ್ನು ನೋಡಿದ ನನ್ನ ಕಣ್ಣುಗಳು ಸ್ವಲ್ಪ ಸಮಯ ತಂಪಾಗಿವೆ ಎಂದು ನಟ ಸಂಜಯ್‌ದತ್‌ ಭಾವುಕರಾಗಿ ನುಡಿದರು.

ಕಳೆದ ಕೆಲವು ದಿನಗಳ ಹಿಂದೆ ಪೇರೋಲ್‌ ಮೇಲೆ ಬಿಡುಗಡೆಯಾಗಿದ್ದ ನಟ ಸಂಜಯ್‌ ದತ್‌ ಇಂದು ಮುಂಜಾನೆ ಮರಳಿ ಪುಣೆಯ ಯರವಾಡ ಜೈಲಿಗೆ ಹೋಗುತ್ತಿರುವ ಸಮಯದಲ್ಲಿ ಹೇಳಿದ ಮಾತುಗಳಿವು. ಕಾಲಿಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆಗಾಗಿ ಪೇರೋಲ್‌ ಪಡೆದು ಅಕ್ಟೋಬರ್‌ 1 ರಂದು ನಟ ಸಂಜಯ್‌ ದತ್‌ ಜೈಲಿಂದ ಹೊರ ಬಂದಿದ್ದರು.

ಆದ್ರೆ ಇಂದಿಗೆ ಅವರ ಪೇರೋಲ್ ಅವಧಿ ಮುಕ್ತಾಯಗೊಂಡಿದ್ದು, ಇಂದು ಜೈಲಿಗೆ ವಾಪಸ್‌ ಆಗಬೇಕಿತ್ತು. ಹೀಗಾಗಿ ಬೆಳಗಾದರೆ, ಅಭಿಮಾನಿಗಳು ಅವರನ್ನು ತಡೆಯಬಹುದು ಎಂದು ತಿಳಿದ ಸಂಜಯ್‌ ದತ್‌ ಇಂದು ಬೆಳ್ಳಂ ಬೆಳಿಗ್ಗೆಯೇ ಪುಣೆಯ ಯರವಾಡ ಜೈಲಿನತ್ತ ಪಯಣ ಬೆಳೆಸಿದ್ರು.

ಈ ವೇಳೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಂಜಯ್‌ ದತ್‌ "ನಾನು ಜೈಲಿನಿಂದ ಬೇಗ ಬಿಡುಗಡೆಯಾಗುವಂತೆ ಆ ದೇವರಲ್ಲಿ ಪ್ರಾರ್ಥನೆ ಮಾಡಿ. ನನ್ನ ಕಾಲಿನ ಗಾಯ ಇನ್ನು ವಾಸಿಯಾಗಿಲ್ಲ ಆದ್ರೆ ನಿಮ್ಮೆಲ್ಲರನ್ನು ನೋಡಿದ ನನ್ನ ಕಣ್ಣುಗಳು ಸ್ವಲ್ಪ ಸಮಯ ತಂಪಾಗಿವೆ ಎಂದು ಭಾವುಕರಾಗಿ ನುಡಿದರು.

Share this Story:

Follow Webdunia kannada