*ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಭವಿಷ್ಯ ವಿಪುಲವಾಗಿದೆ.
* ನಾವು ತಂತ್ರಜ್ಞಾನದ ಬಗ್ಗೆ. ಉತ್ಪಾದನೆ ಹೆಚ್ಚಳದ ಬಗ್ಗೆ ಯೋಚಿಸುತ್ತಿಲ್ಲ.
* ನ್ಯಾಯ ವಿಳಂಬ ನ್ಯಾಯ ನಿರಾಕರಣೆ ಎಂದು ನಾವು ತಿಳಿಯಬೇಕು. ನಾವು ವೇಗದ ನ್ಯಾಯಕ್ಕೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು.
*ಗುಜರಾತಿನಲ್ಲಿ ಅನೇಕ ಬಾಕಿ ಪ್ರಕರಣಗಳಿವೆ. ನಾವು ಅದೇ ಮೂಲಸೌಲಭ್ಯ ಬಳಸಿಕೊಂಡು ಸಂಜೆ ಕೋರ್ಟ್ಗಳನ್ನು ಸ್ಥಾಪಿಸಿದ್ದೇವೆ.
* ನಾವು ಲೋಕಅದಾಲತ್ಗಳಿಗೆ ಪಾವಿತ್ರ್ಯ ನೀಡಿದ್ದೇವೆ. ಈ ಕೋರ್ಟ್ ಲಕ್ಷಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತದೆ.
* ಕೌಶಲ್ಯ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ನಾವು ಒತ್ತು ನೀಡಬೇಕು.
* ಕೌಶಲ್ಯ ಅಭಿವೃದ್ದಿಯ ಬಗ್ಗೆ ನಾವು ಯೋಚಿಸಿದರೆ, ಜನರು ಸ್ವಾವಲಂಬಿಗಳಾಗುತ್ತಾರೆ.
* ರಾಜ್ಯ ಸ್ವಾಮ್ಯದ ಘಟಕಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಈ ವಿಷಯದಲ್ಲಿ ರಾಜಕೀಯ ಇರಬಾರದು.
* ನಮ್ಮ ರಾಜ್ಯಗಳು ನಮಗೆ ಬಲನೀಡುತ್ತವೆ. ಅವು ನಮ್ಮ ದುರ್ಬಲತೆಯಲ್ಲ.
* ಒಕ್ಕೂಟ ವ್ಯವಸ್ಥೆ ಭಾರತಕ್ಕೆ ಅಗತ್ಯವಾಗಿದೆ. ಇದು ಭಾರತಕ್ಕೆ ಶಕ್ತಿ ನೀಡುತ್ತದೆ.
* ನಗರಗಳು ಚಲನಶೀಲ ಆರ್ಥಿಕತೆಯ ದಿಕ್ಕಿನಲ್ಲಿ ಅಭಿವೃದ್ಧಿಯಾಗಬೇಕು.
* ಮುಂಬೈಯನ್ನು ದೆಹಲಿಯಿಂದ ಆಳಲಾಗುತ್ತದೆಯೇ? ನನೆಗ ಗಾಂಧಿನಗರದಿಂದ ಸೂರತ್ ನಿರ್ವಹಣೆ ಸಾಧ್ಯವೇ?
* ತಂತ್ರಜ್ಞಾನವು ಪಾರದರ್ಶಕತೆ ಸಾಧನೆಗೆ ನೆರವಾಗಬಹುದು.
* ಎರಡು ನಿಮಿಷಗಳ ಸಂದರ್ಶನದಲ್ಲಿ ನೀವು ಒಬ್ಬರ ಮೌಲ್ಯಮಾಪನ ಹೇಗೆ ಮಾಡಲಾಗುತ್ತದೆ. ಅವು ಇನ್ನಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡುತ್ತವೆ.