ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳೇನು, ಕೆಳಗಿವೆ ಓದಿ
, ಗುರುವಾರ, 27 ಫೆಬ್ರವರಿ 2014 (17:37 IST)
ನವದೆಹಲಿ: ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಉದ್ದೇಶಿಸಿ ನವದೆಹಲಿಯಲ್ಲಿ ಮಾತನಾಡಿದರು.ಅವರ ಭಾಷಣದ ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ.* ಪ್ರತಿಯೊಬ್ಬರೂ ಅವರು ಇರುವ ಸ್ಥಳದಲ್ಲೇ ಉದ್ಯೋಗ ಸಿಗಬೇಕು. ಅವರು ಉದ್ಯೋಗಕ್ಕಾಗಿ ತಮ್ಮ ಮನೆಗಳನ್ನು ಏಕೆ ಬಿಡಬೇಕು?* ನಗರೀಕರಣವನ್ನು ಅವಕಾಶವೆಂದು ಭಾವಿಸಬೇಕು. ಇದನ್ನು ತೊಡಕು ಎನ್ನುವಂತೆ ಕಾಣಬಾರದು.* ನಮ್ಮ ಗುರಿ- ಗ್ರಾಮದ ಹೃದಯ ಮತ್ತು ನಗರದ ಸೌಲಭ್ಯಗಳು.
*ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಭವಿಷ್ಯ ವಿಪುಲವಾಗಿದೆ.* ನಾವು ತಂತ್ರಜ್ಞಾನದ ಬಗ್ಗೆ. ಉತ್ಪಾದನೆ ಹೆಚ್ಚಳದ ಬಗ್ಗೆ ಯೋಚಿಸುತ್ತಿಲ್ಲ.* ನ್ಯಾಯ ವಿಳಂಬ ನ್ಯಾಯ ನಿರಾಕರಣೆ ಎಂದು ನಾವು ತಿಳಿಯಬೇಕು. ನಾವು ವೇಗದ ನ್ಯಾಯಕ್ಕೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು.*ಗುಜರಾತಿನಲ್ಲಿ ಅನೇಕ ಬಾಕಿ ಪ್ರಕರಣಗಳಿವೆ. ನಾವು ಅದೇ ಮೂಲಸೌಲಭ್ಯ ಬಳಸಿಕೊಂಡು ಸಂಜೆ ಕೋರ್ಟ್ಗಳನ್ನು ಸ್ಥಾಪಿಸಿದ್ದೇವೆ.* ನಾವು ಲೋಕಅದಾಲತ್ಗಳಿಗೆ ಪಾವಿತ್ರ್ಯ ನೀಡಿದ್ದೇವೆ. ಈ ಕೋರ್ಟ್ ಲಕ್ಷಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತದೆ.* ಕೌಶಲ್ಯ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ನಾವು ಒತ್ತು ನೀಡಬೇಕು.