Webdunia - Bharat's app for daily news and videos

Install App

ನರೇಂದ್ರ ಮೋದಿ ಪ್ರಧಾನಿಯಾಗಲು ಅರ್ಹರು: ಆರ್‌ಜೆಡಿ ಮುಖಂಡ

Webdunia
ಬುಧವಾರ, 14 ಆಗಸ್ಟ್ 2013 (14:10 IST)
PTI
ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ದೇಶದ ಜನಪ್ರಿಯ ನಾಯಕರಾಗಿದ್ದು,ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಪಕ್ಷದ ಮುಖಂಡನ ಹೊಗಳಿಕೆ ಅಚ್ಚರಿ ತಂದಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅಡಳಿತ ವೈಖರಿಯನ್ನು ಟೀಕಿಸಿದ ಆರ್‌ಜೆಡಿ ಮುಖಂಡ ನವಲ್ ಕಿಶೋರ್ ಯಾದವ್, ಪ್ರಜಾಪ್ರಭುತ್ವವನ್ನು ಭಾಷಣಗಳಿಂದ ನಡೆಸಲಾಗುತ್ತದೆಯೇ ಹೊರತು ಗುಂಡುಗಳಿಂದಲ್ಲ ಎಂದು ಹೇಳಿದ್ದಾರೆ.

ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ನರೇಂದ್ರ ಮೋದಿ ಅವರಿಗಿದೆ. ನರೇಂದ್ರ ಮೋದಿ ದೇಶದ ಜನಪ್ರಿಯ ನಾಯಕರು ಎಂದು ಯಾದವ್ ಶ್ಲಾಘಿಸಿದ್ದಾರೆ.

ನಳಂದ ಜಿಲ್ಲೆಯ ಬಿಹಾರ್‌ಷರೀಫ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತವರೂರು. ನಿತೀಶ್ ತವರಿನಲ್ಲಿ ನರೇಂದ್ರ ಮೋದಿಯನ್ನು ಹೊಗಳಿರುವುದು ಜೆಡಿಯು ಕಾರ್ಯಕರ್ತರನ್ನು ಕೆರಳಿಸಿದೆ.

ಪ್ರಸ್ತುತವಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಜಕಾರಣಿಯಲ್ಲ, ಜನಪ್ರಿಯ ನಾಯಕರು ಅಲ್ಲ. ಆದ್ದರಿಂದ, 125 ಕೋಟಿ ಜನರನ್ನು ಹೇಗೆ ಪ್ರತಿನಿಧಿಸುತ್ತಾರೆ ಎಂದು ಆರ್‌ಜೆಡಿ ಮುಖಂಡ ನವಲ್ ಕಿಶೋರ್ ಯಾದವ್ ಪ್ರಶ್ನಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments