ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಭರ್ಜರಿ ಪ್ರದರ್ಶನ ಕಂಡ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ನಮ್ಮ ನಿಜವಾದ ಶತ್ರು ನರೇಂದ್ರ ಮೋದಿಯೇ ಹೊರತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಲ್ಲ ಎಂದು ರಾಗ ಬದಲಾಯಿಸಿದ್ದಾರೆ.
ಮೇವು ಹಗರಣದಲ್ಲಿ ಜಾಮೀನು ಪಡೆದು ರಸ್ತೆಯ ಮೂಲಕ ಪಾಟ್ನಾಗೆ ತೆರಳುತ್ತಿರುವ ಲಾಲು ಯಾದವ್, ನಮ್ಮ ಪಕ್ಷದ ಉದ್ದೇಶಗಳು ಸ್ಪಷ್ಟವಾಗಿವೆ ಎಂದರು.
ಮುಂಬರುವ ಲೋಕಸಭೆ ಚುನಾವಣೆಯ ನಂತರ ಜೆಡಿಯು ಪಕ್ಷ ಕಳಪೆ ಸಾಧನೆ ಮಾಡಲಿದೆ. ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿಯಾಗಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ಆರ್ಜೆಡಿ ತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನರೇಂದ್ರ ಮೋದಿಯ ಪ್ರಭಾವ ಎದ್ದು ಕಾಣುತ್ತಿದೆ. ಒಂದು ವೇಳೆ ಕಾಂಗ್ರೆಸ್ ಮೋದಿಗೆ ತಿರುಗೇಟು ನೀಡಬೇಕು ಎಂದು ಬಯಸಿದಲ್ಲಿ ಲಾಲು ಯಾದವ್ ಹೊಣೆ ಹೊರಲು ಸಿದ್ದರಾಗಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.