Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಕುರುಡರಾಗಿದ್ದರಿಂದ ಅಭಿವೃದ್ಧಿ ಕಾಣುತ್ತಿಲ್ಲ: ಸೋನಿಯಾ ಲೇವಡಿ

ನರೇಂದ್ರ ಮೋದಿ ಕುರುಡರಾಗಿದ್ದರಿಂದ ಅಭಿವೃದ್ಧಿ ಕಾಣುತ್ತಿಲ್ಲ: ಸೋನಿಯಾ ಲೇವಡಿ
ನವದೆಹಲಿ , ಗುರುವಾರ, 28 ನವೆಂಬರ್ 2013 (13:25 IST)
PTI
ದೆಹಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 15 ವರ್ಷಗಳಿಂದ ನಿರಂತರವಾಗಿ ಅಭಿವೃದ್ದಿಪಡಿಸಿದೆ. ಆದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಕಣ್ಣುಮುಚ್ಚಿ ಸುಳ್ಳು ಹೇಳುವುದರಲ್ಲಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ರಾಜ್ಯ ಸರಕಾರ ಕೈಗೊಂಡ ಅಭಿವೃದ್ಧಿಗಳ ಬಗ್ಗೆ ಗೊತ್ತಿದ್ದರೂ ವಿಪಕ್ಷಗಳು ವೃಥಾ ಸುಮ್ಮನೆ ಆರೋಪ ಮಾಡುವುದರಲ್ಲಿ ನಿರತವಾಗಿವೆ ಎಂದು ಆರೋಪಿಸಿದರು.

ವಿಪಕ್ಷಗಳು ಜನತೆಯನ್ನು ಜಾತಿ ಮತ ಧರ್ಮದ ಆಧಾರದ ಮೇಲೆ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಇಂತಹ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ಎಚ್ಚರವಿರಬೇಕು ಎಂದು ಬಿಜೆಪಿ ಹೆಸರು ಬಹಿರಂಗಪಡಿಸದೆ ಕಿಡಿಕಾರಿದರು.

ಸೋನಿಯಾ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಪಿಸಿಸಿ ಮುಖ್ಯಸ್ಥ ಜೆ.ಪಿ.ಅಗರ್‌ವಾಲ್ ಉಪಸ್ಥಿತರಿದ್ದರು.

Share this Story:

Follow Webdunia kannada