ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರೇ ಮುಂದಿನ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯ ಯಾವುದೇ ಅನುಮಾನ ಬೇಡ ಎಂದು ಕೇಂದ್ರ ಮಂತ್ರಿ ಮತ್ತು ಬಿಜೆಪಿ ನಾಯಕ ಅರುಣ್ ಶೌರಿ ಪುನರುಚ್ಚರಿಸಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತಾಡಿದ ಬಿಜೆಪಿ ನಾಯಕ ಅರುಣ್ ಶೌರಿ ಮೋದಿ ವಿಷಯವನ್ನು ಒತ್ತಿ ಹೇಳಿದ್ರು. ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಗುಜರಾತ್ ಮುಖ್ಯಮಂತ್ರಿಯವರೇ ಮುಂದಿನ ಬಿಜೆಪಿಯ ಪ್ರಧಾನಿ ಅಭ್ಯರ್ಥಿ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಶೌರಿ ಹೇಳಿದ್ದಾರೆ.
ಭಾರತಕ್ಕೆ ಬೇಕಾಗಿರುವುದು "ಒಡಕುಂಟು ಮಾಡುವ ನಾಯಕರಲ್ಲ. ಒಂದೂಗೂಡಿಸುವ ನಾಯಕರು" ಎಂದು ಹೇಳುವ ಮೂಲಕ ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನರೇಂದ್ರ ಮೋದಿಯೊಬ್ಬರೇ ನಿರ್ಣಾಯಕ ನಾಯಕ. ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಸದಸ್ಯರು ಮೋದಿಯವರೊಂದಿಗೆ ಇದ್ದೇವೆ ಎಂದಿದ್ದಾರೆ.