Webdunia - Bharat's app for daily news and videos

Install App

ನಮ್ಮ ಸಿದ್ಧಾಂತದ ಮೂಲಾಧಾರವೇ ಹಿಂದುತ್ವ: ಆರೆಸ್ಸೆಸ್

Webdunia
ಮಂಗಳವಾರ, 29 ಮಾರ್ಚ್ 2011 (09:06 IST)
ಹಿಂದುತ್ವ ಕಡೆಗಿನ ಬಿಜೆಪಿಯ ನಿಲುವು ಅವಕಾಶವಾದಿತನದಿಂದ ಕೂಡಿದ್ದು ಎಂದು ಆ ಪಕ್ಷದ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ ಎಂಬುದಕ್ಕೆ ಅಂತ್ಯ ಹಾಡಲು ಸ್ವತಃ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಮುಂದಾಗಿದೆ. ಹಿಂದುತ್ವ ಎನ್ನುವುದು ನಮ್ಮ ಸೈದ್ಧಾಂತಿಕ ಚಳವಳಿಯ ಮೂಲಾಧಾರ ಎಂದು ತಿಳಿಸಿದೆ.

ತಮ್ಮ ಸೈದ್ಧಾಂತಿಕ ನಿಲುವಿನ ಬಗ್ಗೆ ಬಿಜೆಪಿ ನಾಯಕತ್ವ ಈಗಾಗಲೇ ಸ್ಪಷ್ಟನೆ ನೀಡಿದೆ. ನಾವು ನಮ್ಮ ನಿಲುವಿನ ಬಗ್ಗೆ ಹೇಳುವುದಾದರೆ, ಹಿಂದುತ್ವವು ನಮ್ಮ ಸೈದ್ಧಾಂತಿಕ ಚಳವಳಿಯಲ್ಲಿ ಪ್ರಮುಖವಾದುದು ಎಂದು ಆರೆಸ್ಸೆಸ್ ನಾಯಕ ರಾಮ್ ಮಾಧವ್ ತಿಳಿಸಿದ್ದಾರೆ.

ವಿಕಿಲೀಕ್ಸ್ ರಹಸ್ಯ ದಾಖಲೆಗಳ ಕುರಿತ ಪ್ರಶ್ನೆ ಬಂದಾಗ, ಹಿಂದುತ್ವದ ಬಗ್ಗೆ ಆರೆಸ್ಸೆಸ್ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿದರು.

ತಾನು 'ಅವಕಾಶವಾದಿತನ' ಎಂಬ ಶಬ್ಧವನ್ನು ಬಳಕೆ ಮಾಡಿಲ್ಲ ಎಂದು ಬಿಜೆಪಿ ನಾಯಕ ಜೇಟ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಮಟ್ಟಿಗೆ ಹೇಳುವುದಾದರೆ, ಪ್ರತಿಯೊಬ್ಬ ಸ್ವಯಂಸೇವಕನೂ ಹಿಂದುತ್ವದಲ್ಲಿ ನಂಬಿಕೆ ಹೊಂದಿದ್ದಾನೆ. ನಮ್ಮ ರಾಷ್ಟ್ರದ ಹೆಗ್ಗುರುತೇ ಹಿಂದುತ್ವ ಎಂದು ನಂಬಿದ್ದಾರೆ ಎಂದು ಆರೆಸ್ಸೆಸ್ ನಾಯಕ ವಿವರಿಸಿದರು.

06-05-2005 ರಂದು ದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ರಾಜಕೀಯ ಸಲಹೆಗಾರ ರಾಬರ್ಟ್ ಬ್ಲೇಕ್ ಅವರ ಜತೆ ಜೇಟ್ಲಿ ಖಾಸಗಿ ಮಾತುಕತೆ ನಡೆಸಿದ್ದರು. ಇದನ್ನು 10-05-2005ರಂದು ಅಮೆರಿಕಾಕ್ಕೆ ರಾಯಭಾರಿ ವರದಿ ಮಾಡಿದ್ದರು. ವಿಕಿಲೀಕ್ಸ್ ಕೈ ಸೇರಿದ್ದ ಆ ದಾಖಲೆ ಇತ್ತೀಚೆಗಷ್ಟೇ 'ದಿ ಹಿಂದೂ' ಪತ್ರಿಕೆ ಮೂಲಕ ಬಹಿರಂಗವಾಗಿತ್ತು.

ಹಿಂದುತ್ವದ ಕುರಿತು ರಾಯಭಾರಿ ಮಾಡಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಜೇಟ್ಲಿ, ಹಿಂದೂ ರಾಷ್ಟ್ರೀಯತೆ ಎನ್ನುವುದು ಬಿಜೆಪಿಯ ಪಾಲಿಗೆ ಯಾವತ್ತೂ ಒಂದು ಜೀವಂತವಾಗಿರುವ ಚರ್ಚೆಯ ವಿಚಾರ. ಅಲ್ಲದೆ, ಇದು 'ಅವಕಾಶವಾದಿತನ'ಕ್ಕೆ ಸಂಬಂಧಪಟ್ಟದ್ದಾಗಿದೆ ವಿಚಾರ ಎಂದಿದ್ದರು ಎಂದು ವಿಕಿಲೀಕ್ಸ್ ದಾಖಲೆ ಹೇಳಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಎರಡು ದಿನ ಭಾರೀ ಮಳೆ, ಕರಾವಳಿಗೆ ಇಂದೂ ಮಳೆಯಿರುತ್ತಾ ನೋಡಿ

ಸಂಸತ್‌ ಕ್ಯಾಂಟೀನ್‌ನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಮೆನುವಿನಲ್ಲಿ ಭಾರೀ ಬದಲಾವಣೆ ತಂದ ಸ್ಪೀಕರ್‌

ಒಡಿಶಾ, ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪ್ರತಿಭಟನಕಾರರನ್ನು ಚದುರಿಸಲು ಜಲಫಿರಂಗಿ ಪ್ರಯೋಗ

ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ: ನಾರಾಯಣ ಮೂರ್ತಿ

Karnataka Rain Alert: ಮುಂದಿನ 7 ದಿನಗಳ ಕಾಲ ಈ ಪ್ರದೇಶದಲ್ಲಿ ಭಾರೀ ಮಳೆ

Show comments