Select Your Language

Notifications

webdunia
webdunia
webdunia
webdunia

ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಬಾಲಕಿಗೆ ಬೆಂಕಿ ಹಚ್ಚಿದ ಯುವಕರು

ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಬಾಲಕಿಗೆ ಬೆಂಕಿ ಹಚ್ಚಿದ ಯುವಕರು
ಗೋರಕ್‌ಪುರ್ , ಶುಕ್ರವಾರ, 11 ಏಪ್ರಿಲ್ 2014 (09:13 IST)
ಅತ್ಯಾಚಾರಕ್ಕೆ ಪ್ರತಿರೋಧಿಸಿದ್ದಕ್ಕಾಗಿ 16 ವರ್ಷದ ಬಾಲಕಿಗೆ ಇಬ್ಬರು ಯುವಕರು ಸೇರಿ ಬೆಂಕಿ ಹಚ್ಚಿದ ಘಟನೆ ಕುಶಿನಗರ್ ಪೋಲಿಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.
PTI

ತೀವೃ ಗಾಯಗೊಂಡಿದ್ದ ಅವಳು ಚಿಕಿತ್ಸೆಗಾಗಿ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದಳು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಪೋಲಿಸ್ ತುಕಡಿಯನ್ನು ನಿಯೋಜಿಸಲಾಗಿದೆ.

ಆರೋಪಿಗಳಾದ "ಸೋಭಿ ಮತ್ತು ಅಮಿತ್ ಪೊಲೀಸ್ ಬಂಧನದಲ್ಲಿದ್ದು, ಅವರ ವಿರುದ್ಧ ಕಠಿಣ ಕ್ರಮ ಎಂದು ತೆಗೆದುಕೊಳ್ಳಲಾಗುವುದು." ಎಂದು ಕುಶಿನಗರದ ಎಸ್ಪಿ ಲಲಿತ್ ಕುಮಾರ ಹೇಳಿದ್ದಾರೆ. ಬಲಿಪಶುವಿನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಂದು ಹೇಳಿದರು.

ವರದಿಗಳ ಪ್ರಕಾರ ಬುಧವಾರ ಸಂಜೆ ಬಲಿಪಶುವಿನ ಮನೆಗೆ ಹೋದ ತಾಯೀಬ್(22) ಮತ್ತು ಅಮಿತ್ ಗುಪ್ತಾ (21) ಆಕೆಯೊಬ್ಬಳೆ ಇರುವುದನ್ನು ನೋಡಿ, ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಆಕೆ ಬಲವಾದ ಪ್ರತಿರೋಧ ಒಡ್ಡಿದಾಗ ಅವಳ ದೇಹದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.

ಸಹಾಯವನ್ನು ಬಯಸಿ ಆಕೆ ಓಡುತ್ತ ಹೊರ ಓಡಿ ಬಂದಾಗ, ಬೆಂಕಿ ನಂದಿಸಿದ ಗ್ರಾಮಸ್ಥರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ 90%ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಆಕೆ ಸಾವನ್ನಪ್ಪಿದಳು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada