Select Your Language

Notifications

webdunia
webdunia
webdunia
webdunia

ದೇಶಕ್ಕೆ ಐಎಎಸ್ ಅಧಿಕಾರಿಗಳ ಅಗತ್ಯವಿಲ್ಲ: ಸಚಿವ ಆಜಂಖಾನ್

ದೇಶಕ್ಕೆ ಐಎಎಸ್ ಅಧಿಕಾರಿಗಳ ಅಗತ್ಯವಿಲ್ಲ: ಸಚಿವ ಆಜಂಖಾನ್
ಬರೇಲಿ , ಶುಕ್ರವಾರ, 9 ಆಗಸ್ಟ್ 2013 (16:30 IST)
PTI
ದೇಶದಲ್ಲಿ 125 ಕೋಟಿ ಜನರು ಬುದ್ದಿವಂತರಿದ್ದು, ಐಎಎಸ್ ಅಧಿಕಾರಿಗಳ ಅಗತ್ಯವಿಲ್ಲ ಎಂದು ಉತ್ತರಪ್ರದೇಶದ ಸಚಿವ ಆಜಂ ಖಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್ಪಾಲ್ ಅಮಾನತ್ತು ಕುರಿತಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮನಮೋಹನ್‌ ಸಿಂಗ್ ಅವರಿಗೆ ಪತ್ರ ಬರೆದಿರುವದನ್ನು ನೋಡಿದಲ್ಲಿ ಅಧಿಕಾರಿಗಳ ವರ್ಗಾವಣೆಯಂತಹ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ ಎಂದು ಲೇವಡಿ ಮಾಡಿದ್ದಾರೆ.

ದುರ್ಗಾರನ್ನು ಮಾಧ್ಯಮಗಳು ಮಾತೆ ದುರ್ಗೆಯಂತೆ ಬಿಂಬಿಸುತ್ತಿವೆ. ವ್ಯವಸ್ಥಾಪಕ ನಿರ್ದೇಶಕರಿಂದ ಮುಖ್ಯ ಅಭಿಯಂತರವರರು ಅಮಾನತುಗೊಂಡಲ್ಲಿ ಮಾಧ್ಯಮಗಳು ಒಂದು ಲೈನ್ ಕೂಡಾ ಬಿತ್ತರಿಸುವುದಿಲ್ಲ ಎಂದು ಕಿಡಿಕಾರಿದರು.

ದೇಶದಲ್ಲಿ ಕೇವಲ 1 ಸಾವಿರದಿಂದ 2 ಸಾವಿರದಷ್ಟು ಮಾತ್ರ ಐಎಎಸ್ ಅಧಿಕಾರಿಗಳಿದ್ದಾರೆ. ಆದರೆ, ದೇಶದ 125 ಕೋಟಿ ಜನ ಬುದ್ದಿವಂತರಿದ್ದಾರೆ ಎಂದು ಸಚಿವ ಆಜಂಖಾನ್ ಗುಡುಗಿದ್ದಾರೆ.

Share this Story:

Follow Webdunia kannada