Webdunia - Bharat's app for daily news and videos

Install App

ದುಪ್ಪಟ್ಟು ವೇತನ; ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್

Webdunia
ಸೋಮವಾರ, 28 ಫೆಬ್ರವರಿ 2011 (14:00 IST)
ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಬಜೆಟ್‌ನಲ್ಲಿ ಅಂಗನಾಡಿ ಕಾರ್ಯಕರ್ತೆಯರ ವೇತನವನ್ನು ಹೆಚ್ಚಳ ಮಾಡಿದ್ದರು. ಈಗ ಕೇಂದ್ರ ಸರಕಾರವೂ ಅದೇ ಹಾದಿ ತುಳಿದಿದೆ. ಆ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬಂಪರ್ ಹೊಡೆದಿದ್ದಾರೆ.

ಇಂದು ಲೋಕಸಭೆಯಲ್ಲಿ ಆರ್ಥಿಕ ಆಯವ್ಯಯ ಪಟ್ಟಿಯನ್ನು ಮಂಡಿಸಿದ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು, ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ವೇತನವನ್ನು 1,500ಯಿಂದ 3,000 ರೂಪಾಯಿಗಳಿಗೆ ಹಾಗೂ ಅಂಗನವಾಡಿ ಸಹಾಯಕಿಯರ ವೇತನವನ್ನು 750 ರೂಪಾಯಿಗಳಿಂದ 1,500 ರೂಪಾಯಿಗಳಿಗೆ ಏರಿಕೆ ಮಾಡಲಾಗುವುದು ಎಂದರು.

ಇದು 2011ರ ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಇದರ ಲಾಭವನ್ನು ದೇಶದಾದ್ಯಂತದ 22 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಡೆದುಕೊಳ್ಳಲಿದ್ದಾರೆ ಎಂದು ಮುಖರ್ಜಿ ತಿಳಿಸಿದರು.

ರಾಜ್ಯ ಸರಕಾರವೂ ಏರಿಕೆ ಮಾಡಿತ್ತು...
ಗುರುವಾರ ರಾಜ್ಯ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ, ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 2,500 ರೂಪಾಯಿಗಳಿಂದ 3,000 ರೂಪಾಯಿಗಳಿಗೆ ಹಾಗೂ ಸಹಾಯಕಿಯರ ವೇತನವನ್ನು 1,250 ರೂಪಾಯಿಗಳಿಂದ 1,500 ರೂಪಾಯಿಗಳಿಗೆ ಏರಿಕೆ ಮಾಡಿದ್ದರು.

ಕೇಂದ್ರ ಸರಕಾರ ನೀಡುವ ಮೊತ್ತಕ್ಕೆ ರಾಜ್ಯವು ತನ್ನ ಪಾಲನ್ನು ಸೇರಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಸರಕಾರ ವೇತನ ನೀಡುವುದಾದರೆ, ಈ ನೌಕರರ ವೇತನವು ಕೆಳಗಿನಂತೆ ಇರುತ್ತದೆ.

ಕೇಂದ್ರ ಸರಕಾರವೇ ಅಂಗನವಾಡಿ ಕಾರ್ಯಕರ್ತೆಯರಿಗೆ 3,000 ರೂಪಾಯಿ ವೇತನ ನೀಡಲಿರುವುದರಿಂದ, ರಾಜ್ಯದ ಪ್ರಮಾಣವೂ ಸೇರಿದಾಗ ಬಹುತೇಕ 4,500 ಸಾವಿರ ರೂಪಾಯಿಗಳಾಗುತ್ತವೆ. ಅದೇ ರೀತಿ ಸಹಾಯಕಿಯರು ಕೇಂದ್ರ ಸರಕಾರದ 1,500 ಸಾವಿರ ಹಾಗೂ ರಾಜ್ಯದ 750 ರೂಪಾಯಿಗಳು, ಅಂದರೆ 2,250 ರೂಪಾಯಿಗಳನ್ನು ಪಡೆಯಬಹುದು.

ಕೇಂದ್ರದ ಅನುದಾನವನ್ನು ರಾಜ್ಯ ಸರಕಾರವು ಪರಿಷ್ಕರಣೆ ಮಾಡಿ ನೀಡುವುದರಿಂದ, ಈ ಮೊತ್ತ ಅಂಗನವಾಡಿ ನೌಕರರಿಗೆ ಸಿಗುವ ಬಗ್ಗೆ ಖಚಿತತೆಯಿಲ್ಲ. ರಾಜ್ಯ ಸರಕಾರವು ಕೇಂದ್ರ ಅನುದಾನವನ್ನು ಬಳಸಿಕೊಂಡು, ಇಂತಿಷ್ಟು ವೇತನ ಎಂದು ನೀಡುವ ಸಾಧ್ಯತೆಗಳೂ ಇರುತ್ತವೆ. ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಅಲಭ್ಯ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

6 ತಿಂಗಳಿನಿಂದ ಅಪ್ಪ, ಅಮ್ಮನ ಭೇಟಿಯಾಗಿಲ್ಲ, ಶಿಕ್ಷೆ ಕಡಿಮೆಗಾಗಿ ಜಡ್ಜ್‌ ಮುಂದೆ ಪ್ರಜ್ವಲ್ ಕಣ್ಣೀರು

ಪ್ರತಿಭಟನೆ ಮಾಡಲಿರುವ ರಾಹುಲ್ ಗಾಂಧಿ ವಿರುದ್ಧವೇ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ನವರೇ ಚುನಾವಣೆ ಅಕ್ರಮ ಮಾಡಿದ್ದಾರೆಂದು ನಮಗೆ ಅನುಮಾನವಿದೆ: ಸಿಟಿ ರವಿ

ಜಾರ್ಖಂಡ್‌ನ ಮಾಜಿ ಸಿಎಂ ಶಿಬು ಸೊರೆನ್ ಆರೋಗ್ಯ ಸ್ಥಿತಿ ಗಂಭೀರ, ಏನಾಗಿದೆ ಜೆಎಂಎಂ ನಾಯಕನಿಗೆ

ಪ್ರಜ್ವಲ್ ರೇವಣ್ಣ ಮಾಡಿದ್ದ ಈ ಒಂದು ದರ್ಪದ ವರ್ತನೆಯೇ ಅವರು ಸಿಕ್ಕಿಹಾಕುವಂತೆ ಮಾಡಿತು

Show comments