ಇಡೀ ಜಗತ್ತಿನಲ್ಲಿ ಅತ್ಯಂತ ಸುಖೀ ಮುಖ್ಯಮಂತ್ರಿ ಯಾರು ಎಂದರೆ ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್. ಅವರಿಗೆ ಯಾವ ಚಿಂತೆಯೂ ಇಲ್ಲ. ದಿಲ್ಲಿ ಕೊಳ್ಳೆ ಹೊಡದರೂ ಯಾವ ಚಿಂತೆಯೂ ಇಲ್ಲದೇ ಆರಾಮಾಗಿ ನಿದ್ದೆ ಮಾಡುವ ಏಕೈಕ ಮುಖ್ಯಮಂತ್ರಿ ಎಂದರೆ, ಶೀಲಾ ದೀಕ್ಷಿತ್ ಒಬ್ಬರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ದೆಹಲಿ ಸರ್ಕಾರಕ್ಕೆ ಲಕ್ವಾ ಹೋಡೆದಿದೆ , ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದರೆ ಇದಕ್ಕೆ ಸೂಕ್ತ ಪರಿಹಾರ ನೀಡಿ, ಮಹಿಳೆಯರನ್ನು ರಕ್ಷಿಸಬೇಕಾಗಿರುವ ರಾಜ್ಯದ ಮುಖ್ಯಮಂತ್ರಿ ಯಾವುದೇ ಚಿಂತೆ ಇಲ್ಲದೆ ಆರಾಮಾಗಿ ನಿದ್ದೆ ಮಾಡುತ್ತಿರುವುದು ಖೇದನೀಯ. ಮಾಡಲು ತುಂಬಾ ಕೆಲಸಗಳಿವೆ. ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ಸಮಸ್ಯೆ ಇದೆ. ಸುರಕ್ಷತೆಯ ಸಮಸ್ಯೆ ಇದೆ. ಅಭಿವೃದ್ದಿ ಕುಂಟಿತವಾಗುತ್ತಿದೆ. ಇದೆಲ್ಲದರ ಬಗ್ಗೆ ಯೋಚನೆ ಮಾಡದೇ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಣ್ಣು ಮುಚ್ಚಿ ನಿದ್ದೆ ಮಾಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ರು.
ದೆಹಲಿಯ ಜಪಾನೀಸ್ ಮೈದಾನದಲ್ಲಿ ನಡೆದ ಬೃಹತ್ ಐತಿಹಾಸಿಕ ರ್ಯಾಲಿಯಲ್ಲಿ ಮಾತನಾಡಿದ ಮೋದಿ ದೆಹಲಿಯ ಸರ್ಕಾರವನ್ನು ಬದಲಾಯಿಸಿ.. ಕಾಂಗ್ರೆಸ್ ಅನ್ನು ಕಿತ್ತೊಗೆಯಿರಿ ಆಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮೋದಿ ಜನತೆಗೆ ಕರೆ ನೀಡಿದ್ರು.