Webdunia - Bharat's app for daily news and videos

Install App

ದಾಂತೇವಾಡ: ಸ್ವಾಮಿ ಅಗ್ನಿವೇಶ್‌, ಪತ್ರಕರ್ತರಿಗೆ ಮೊಟ್ಟೆ ಏಟು

Webdunia
ಭಾನುವಾರ, 27 ಮಾರ್ಚ್ 2011 (14:08 IST)
PR
ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ಬುಡಕಟ್ಟು ಜನರ ಮನೆಗಳು ಬೆಂಕಿಗೆ ಆಹುತಿಯಾದ ದುರಂತದ ಬಗ್ಗೆ ಮಾಹಿತಿ ಸಂಗ್ರಹಿಸಲು ತೆರಳಿದ್ದ ಫಯರ್ ಬ್ರ್ಯಾಂಡ್ ಖ್ಯಾತಿಯ ಸ್ವಾಮಿ ಅಗ್ನಿವೇಶ್ ಮತ್ತು ಇತರ ಸಮಾಜ ಸೇವಾ ಕಾರ್ಯಕರ್ತರ ಮೇಲೆ ಸಲ್ವಾ ಜುಡೋಮ್ ಸಂಘಟನೆಯ ಸದಸ್ಯರು ಮೊಟ್ಟೆ ಮತ್ತು ಟೊಮ್ಯಾಟೋ ಎಸೆದ ಘಟನೆ ಶನಿವಾರ ನಡೆದಿದೆ.

ದಾಂತೇವಾಡ ಜಿಲ್ಲೆಯ ಟಾರ್ಮೆಟ್ಲಾ ಗ್ರಾಮದಲ್ಲಿನ ಸುಮಾರು 300 ಮನೆಗಳಿಗೆ ಸ್ಪೆಷಲ್ ಪೊಲೀಸ್ ಪಡೆ ಬೆಂಕಿ ಹಚ್ಚಿ ಸುಟ್ಟಿತ್ತು. ಈ ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಮೂರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಸ್ಪೆಷಲ್ ಪೊಲೀಸ್ ಪಡೆ ಟಾರ್ಮೆಟ್ಲಾ, ಟಿಮಾಪುರಂ ಹಾಗೂ ಮೋರ್ಪಾಲ್ಲಿಯಲ್ಲಿ ಐದು ದಿನಗಳ ಕಾಲ ನಡೆಸಿದ ಮಾವೋ ವಿರೋಧಿ ಕಾರ್ಯಚರಣೆಯಲ್ಲಿ ಈ ದುಷ್ಕೃತ್ಯ ಎಸಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿತ್ತು.

ಆ ಹಿನ್ನೆಲೆಯಲ್ಲಿ ಶನಿವಾರ ಘಟನೆ ನಡೆದ ಸ್ಥಳಕ್ಕೆ ಸ್ವಾಮಿ ಅಗ್ನಿವೇಶ್ ಮತ್ತು ಅವರ ತಂಡ ಭೇಟಿ ನೀಡಿ, ಮನೆ-ಮಠ ಕಳೆದುಕೊಂಡವರಿಗೆ ಬಟ್ಟೆ, ಬ್ಲ್ಯಾಂಕೆಟ್ ಹಾಗೂ ಕೆಲವು ದಿನನಿತ್ಯದ ವಸ್ತುಗಳನ್ನು ವಿತರಿಸಿದ್ದರು. ಈ ಸಂದರ್ಭದಲ್ಲಿಯೇ ಸಲ್ವಾ ಜುಡೋಮ್ ಸಂಘಟನೆಯ ಸದಸ್ಯರು ಅಗ್ನಿವೇಶ್ ಮತ್ತು ತಂಡದ ಮೇಲೆ ಮೊಟ್ಟೆ, ಟೊಮ್ಯಾಟೋ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೂ ಮುನ್ನ ಅಗ್ನಿವೇಶ್ ಮತ್ತು ತಂಡ ಕಾರಿನಲ್ಲಿ ತೆರಳಿದ್ದ ಸಂದರ್ಭದಲ್ಲಿ ಅವರನ್ನು ದಾರಿಯಲ್ಲೇ ಅಡ್ಡಹಾಕಿದ ಸೆಲ್ವಾ ಜುಡೋಮ್ ಸಂಘಟನೆಯ ಸದಸ್ಯರು ಮೊಟ್ಟೆ, ಟೊಮ್ಯಾಟೋ ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸ್ವಾಮಿ ಹಾಗೂ ಪತ್ರಕರ್ತರನ್ನು ಕೂಡ ಥಳಿಸಿರುವುದಾಗಿ ಅಗ್ನಿವೇಶ್ ದೂರಿದ್ದಾರೆ.

ಅಷ್ಟೇ ಅಲ್ಲದೆ ತಾವು ಗುಡ್ಡಗಾಡು ಜನರಿಗೆ ನೀಡಿದ್ದ ಪರಿಹಾರ ವಸ್ತುಗಳನ್ನು ಎಸ್ಪಿಓ ಮತ್ತು ಸಲ್ವಾ ಜುಡೋಮ್ ಸದಸ್ಯರು ವಶಪಡಿಸಿಕೊಂಡಿರುವುದಾಗಿ ಆರೋಪಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ: ವಿಜಯೇಂದ್ರ ಸ್ಪೋಟಕ ಹೇಳಿಕೆ

ಬೈರತಿ ಬಸವರಾಜು ವಿರುದ್ಧ ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ: ಆರ್ ಅಶೋಕ್

Arecanut price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿ ಬೆಲೆ ಇಳಿಮುಖದತ್ತ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೆಮ್ಮಿದಾಗ ಎದೆನೋವಾಗುತ್ತಿದ್ದರೆ ಏನರ್ಥ

Show comments