Webdunia - Bharat's app for daily news and videos

Install App

ಥಾಮಸ್ 'ರಾಜೀನಾಮೆ': ಮೊಯ್ಲಿ ಹೇಳಿಕೆಗೆ ಬಿಜೆಪಿ ಕಿಡಿ

Webdunia
ಶುಕ್ರವಾರ, 4 ಮಾರ್ಚ್ 2011 (14:25 IST)
PTI
ವಿವಾದಾತ್ಮಕ ಅಧಿಕಾರಿ ಪಿ.ಜೆ.ಥಾಮಸ್ ಅವರು ಸಿವಿಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ತಕ್ಷಣ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಅವರ ವಿರುದ್ಧ ಕಿಡಿ ಕಾರಿರುವ ಬಿಜೆಪಿ, ಸಿವಿಸಿ ನೇಮಕ ಪ್ರಕ್ರಿಯೆಯನ್ನೇ ಸುಪ್ರೀಂ ಕೋರ್ಟು ರದ್ದು ಮಾಡಿರುವುದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದೆ.

" ಗೌರವಾನ್ವಿತ ಕಾನೂನು ಸಚಿವರು ಏನು ಹೇಳುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ. ಸಿವಿಸಿ ಪಿ.ಜೆ.ಥಾಮಸ್ ಅವರಿಂದ ರಾಜೀನಾಮೆ ಪಡೆಯುವುದು ಹೇಗೆ ಸಾಧ್ಯ? ಯಾಕೆಂದರೆ ಸುಪ್ರೀಂ ಕೋರ್ಟು ತೀರ್ಪು ಪ್ರಕಾರ ಅವರು ಸಿವಿಸಿಗೆ ನೇಮಕವೇ ಆಗಿಲ್ಲ (ನೇಮಕವೇ ಅಕ್ರಮ ಎಂದು ಹೇಳಿ ಅದನ್ನು ಸುಪ್ರೀಂ ಕೋರ್ಟು ರದ್ದುಪಡಿಸಿತ್ತು) ಈ ಬಗ್ಗೆ ನೋಟಿಸ್ ನೀಡುವ ಅಗತ್ಯವೂ ಇಲ್ಲ. ಥಾಮಸ್ ಅವರು ಸಿವಿಸಿ ಕಚೇರಿಗೇ ಕಾಲಿಡುವಂತಿಲ್ಲ" ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಹೇಳಿದರು.

ಥಾಮಸ್ ಅವರು ಸಿವಿಸಿಯಾಗಿ ನೇಮಕವಾಗಿರುವುದನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕಾನೂನು ಸಚಿವಾಲಯವು ಶುಕ್ರವಾರ ಹೇಳಿತ್ತು.

ಇದೀಗ ಅವಸರದ ಸ್ಪಷ್ಟನೆ ನೀಡಿರುವ ಮೊಯ್ಲಿ, "ಈಗಾಗಲೇ ಥಾಮಸ್ ನೇಮಕವನ್ನು ಸುಪ್ರೀಂ ಕೋರ್ಟು ರದ್ದು ಮಾಡಿರುವುದರಿಂದ ಸಿವಿಸಿ ರಾಜೀನಾಮೆ ನೀಡುವ ಅಗತ್ಯವಿಲ್ಲ. ಮತ್ತು ಅವರು ಮುಂದುವರಿಯುವ ಪ್ರಶ್ನೆಯೂ ಇಲ್ಲ. ಹೊಸ ನೇಮಕಾತಿಗಾಗಿ "ಸಿವಿಸಿ ಹುದ್ದೆ ಖಾಲಿ ಇದೆ" ಎಂಬ ಒಕ್ಕಣೆಯೊಂದಿಗೇ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತದೆ" ಎಂದಿದ್ದಾರೆ.

ಆದರೆ, ಪಿ.ಜೆ.ಥಾಮಸ್ ಅವರು ಸಿವಿಸಿ ಹುದ್ದೆ ತೊರೆಯುವ ಸಾಧ್ಯತೆಗಳು ದೂರವಾಗಿವೆ. ಯಾಕೆಂದರೆ, ಅವರ ವಕೀಲ ವಿಲ್ಸ್ ಮ್ಯಾಥ್ಯೂಸ್ ಅವರು ಹೇಳಿಕೆ ನೀಡಿದ್ದು, ಥಾಮಸ್ ಅವರು ರಾಜೀನಾಮೆ ನೀಡುವುದಿಲ್ಲ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

Show comments