Select Your Language

Notifications

webdunia
webdunia
webdunia
webdunia

ತುಳಜಾಪುರದಲ್ಲಿ ಭೀಕರ ಅಪಘಾತಕ್ಕೆ ಆರು ವಿದ್ಯಾರ್ಥಿಗಳು ಬಲಿ

ತುಳಜಾಪುರದಲ್ಲಿ ಭೀಕರ ಅಪಘಾತಕ್ಕೆ ಆರು ವಿದ್ಯಾರ್ಥಿಗಳು ಬಲಿ
, ಶನಿವಾರ, 7 ಡಿಸೆಂಬರ್ 2013 (13:28 IST)
PR
PR
ತುಳಜಾಪುರ: ಮಹಾರಾಷ್ಟ್ರದ ತುಳಜಾಪುರ ಬಳಿ ಇಂದು ಭೀಕರ ಅಪಘಾತ ಸಂಭವಿಸಿದ್ದು ಮಿನಿ ಬಸ್- ವೋಲ್ವೋ ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಕೊಲ್ಲಾಪುರ ಮೂಲದವರು. ಪ್ರವಾಸಕ್ಕೆ ಉತ್ಸಾಹದಿಂದ ಹೊರಟಿದ್ದ ವಿದ್ಯಾರ್ಥಿಗಳ ಪಾಲಿಗೆ ಈ ಪ್ರವಾಸವು ಮೃತ್ಯುಸದೃಶವಾಗುತ್ತದೆಂದು ಎಣಿಸಿರಲಿಲ್ಲ. ಆದರೆ ವಿಧಿಲಿಖಿತವೆಂಬಂತೆ 6 ವಿದ್ಯಾರ್ಥಿಗಳು ಸಾವಿನ ದವಡೆಗೆ ಬಲಿಯಾದರು.ಈ ವಿದ್ಯಾರ್ಥಿಗಳು ಕೊಲ್ಲಾಪುರದ ತುಳಜಾಪುರದ ಅಂಬಾಭವಾನಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ 6 ವಿದ್ಯಾರ್ಥಿಗಳು ಸತ್ತಿದ್ದು, 10 ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಗಣೇಶ್ ಕುಂಬಾರ್, ಆಕಾಶ್, ಸೂರಜ್ ಪಾಟೀಲ್, ಪಂಕಜ್ ಕುಂಬಾರ್, ಅಕ್ಷಯ್, ಚಾಲಕ ಪ್ರತಾಪ್ ಮೃತರಾದ ದುರ್ದೈವಿಗಳು. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿದೆ. ಮಿನಿ ಬಸ್‌ನಲ್ಲಿ 17 ಜನರು ಪ್ರಯಾಣ ಮಾಡುತ್ತಿದ್ದರು.

Share this Story:

Follow Webdunia kannada