ತಿರುಪತಿ ಇದೀಗ ತಮಿಳುನಾಡಿನ ಪಾಲು?
ಚೆನ್ನೈ , ಭಾನುವಾರ, 25 ಆಗಸ್ಟ್ 2013 (17:36 IST)
ಆಂಧ್ರ ಇಬ್ಭಾಗವಾದ ಹಿನ್ನೆಲೆಯಲ್ಲಿಯೇ ಇದೀಗ ಮತ್ತೊಂದು ಆಘಾತ ಆಂಧ್ರಕ್ಕೆ ಎದುರಾಗಿದೆ. ಆಂಧ್ರದ ಕಳಶದಂತಿರುವ ತಿರುಪತಿಯನ್ನು ತಮಿಳುನಾಡಿಗೆ ಸೇರಿಸಬೇಕು ಎಂದು ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ.ತಿರುಪತಿ ಮತ್ತು ಇನ್ನಿತರ ಕೆಲವು ಪ್ರದೇಶಗಳು ತಮಿಳುನಾಡಿಗೆ ಸೇರಬೇಕಾದವು. ಆದರೆ ಅನಿವಾರ್ಯವಾಗಿ ಆಂಧ್ರಕ್ಕೆ ಬಿಟ್ಟುಕೊಡಲಾಗಿದೆ. ಇದೀಗ ಆಂಧ್ರ ಇಬ್ಭಾಗವಾಗಿದೆ. ಈಗ ತಿರುಪತಿಯನ್ನು ತಮಿಳುನಾಡಿಗೆ ಸೇರಿಸಬೇಕು ಎಂದು ಸಾಹಿತಿಗಳು ಹೊಸ ಬಾಂಬ್ ಸಿಡಿಸಿದ್ದಾರೆ. ಈಗಾಗಲೇ ಆಂಧ್ರದಲ್ಲಿ ಬಹಳಷ್ಟು ಸಮಸ್ಯೆಗಳು ಉಲ್ಬಣಿಸಿವೆ. ತೆಲಂಗಾಣ ಗಲಾಟೆ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಉದ್ಯೋಗಿಗಳು, ಬ್ಯಾಂಕಿಂಗ್ ಅಧಿಕಾರಿಗಳು ಈ ಇಬ್ಬಾಗದಿಂದ ತಮ್ಮ ಕೆಲಸಕ್ಕೆ ಕುತ್ತಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಿರುಪತಿಯನ್ನು ತಮಿಳುನಾಡಿಗೆ ಸೇರಿಸು ಕೂಗುಗಳು ಕೇಳಿ ಬರ್ತಿರೋದು ದೊಡ್ಡ ದುರಂತವೇ ಸರಿ.