Webdunia - Bharat's app for daily news and videos

Install App

ತಪ್ಪು ನಿರ್ಧಾರ, ಇದಕ್ಕೆ ನಾನೇ ಹೊಣೆ: ಸಿವಿಸಿ ಬಗ್ಗೆ ಪ್ರಧಾನಿ

Webdunia
ಸೋಮವಾರ, 7 ಮಾರ್ಚ್ 2011 (13:19 IST)
PTI
ಸಿವಿಸಿಯಾಗಿ ಪಿ.ಜೆ.ಥಾಮಸ್ ನೇಮಕವು 'ತಪ್ಪು ನಿರ್ಧಾರ' ಎಂದು ಒಪ್ಪಿಕೊಂಡ ಪ್ರಧಾನಿ ಮನಮೋಹನ್ ಸಿಂಗ್, ಅದರ "ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುವೆ" ಎಂದು ಲೋಕಸಭೆಯಲ್ಲಿ ಸೋಮವಾರ ಹೇಳಿಕೆ ನೀಡಿದ್ದಾರೆ.

ಈ ಉತ್ತರದಿಂದ ಎಡಪಕ್ಷಗಳು ಸಂತೃಪ್ತವಾಗದೆ ಸಭಾತ್ಯಾಗ ನಡೆಸಿದರೆ, ಬಿಜೆಪಿ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು, ಪ್ರಧಾನಿಯ ಲಿಖಿತ ಹೇಳಿಕೆಗಳ ಬಗ್ಗೆ ಆಕ್ಷೇಪ ಎತ್ತಿದರು.

ಲಿಖಿತ ಹೇಳಿಕೆಯಲ್ಲಿ ಸಿವಿಸಿ ನೇಮಕಾತಿ ಬಗೆಗಿನ ವಿವರಗಳನ್ನು ನೀಡಲಾಗಿದ್ದು, ಕಳೆದ ವಾರ ಸುಪ್ರೀಂ ಕೋರ್ಟು ಇದನ್ನು ರದ್ದುಗೊಳಿಸಿರುವುದರ ಉಲ್ಲೇಖ ಮಾತ್ರ ಇತ್ತು. ಮತ್ತು ಸುಪ್ರೀಂ ಕೋರ್ಟ್ ತೀರ್ಮಾನವನ್ನು ನಾವು ಸ್ವೀಕರಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದು ಹೇಳಿದ್ದರು ಪ್ರಧಾನಿ. ಮತ್ತು ನೇಮಕಾತಿ ಸಮಿತಿಯಲ್ಲಿದ್ದ ಸುಷ್ಮಾ ಅವರು ಆಕ್ಷೇಪ ಎತ್ತಿದ್ದರು ಎಂದೂ ಒಪ್ಪಿಕೊಂಡಿದ್ದರು. ಅವರು ಹೇಳಿಕೆಯನ್ನು ಓದಿ ಮುಗಿಸಿದ ಬಳಿಕ ಸುಷ್ಮಾ ಧ್ವನಿಯೆತ್ತಿದರು.

ಸಿವಿಸಿ ನೇಮಕದ ಹೊಣೆ ಹೊತ್ತುಕೊಳ್ಳುವ ಕುರಿತು ಜಮ್ಮುವಿನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ ಅಂಶ ಈ ಹೇಳಿಕೆಯಲ್ಲಿಲ್ಲದಿರುವುದು ಅಚ್ಚರಿಯುಂಟು ಮಾಡಿದೆ ಎಂದು ಆಕ್ಷೇಪವೆತ್ತಿದರು ಸುಷ್ಮಾ ಸ್ವರಾಜ್. ಕನಿಷ್ಠ ಪಕ್ಷ ಜಮ್ಮುವಿನಲ್ಲಿ ನೀವೇನು ಹೇಳಿದ್ದೀರೋ ಅದನ್ನಾದರೂ ಪುನರಾವರ್ತಿಸುತ್ತೀರಿ ಅಂದುಕೊಂಡಿದ್ದೆ ಎಂದು ಹೇಳಿದಾಗ, ಬಿಜೆಪಿ ಸದಸ್ಯರು "ಶೇಮ್ ಶೇಮ್" ಕೂಗಿದರು.

ತಕ್ಷಣವೇ ಮತ್ತೆ ಎದ್ದು ನಿಂತ ಪ್ರಧಾನಿ, ಸಿವಿಸಿ ನೇಮಕಾತಿಯು ತಪ್ಪು ತೀರ್ಮಾನವಾಗಿದ್ದು, ಇದರ ಎಲ್ಲ ಹೊಣೆಯನ್ನೂ ತಾನೇ ಹೊರುವುದಾಗಿ ಸ್ಪಷ್ಟಪಡಿಸಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಜ್ಞಾನ ಪಿಯು ಕಾಲೇಜಿನಲ್ಲಿ ಸಿಎ, ಸಿಎಸ್ ಫೌಂಡೇಶನ್ ಕೋರ್ಸ್ ಓರಿಯೆಂಟೇಶನ್ ಕಾರ್ಯಕ್ರಮ

ಮೊದಲ ಪಾಯಿಂಟ್‌ನಲ್ಲಿ ಬೆಳಗ್ಗೆಯಿಂದ ಮಣ್ಣು ಅಗೆದರು ಸಿಗದ ಕಳೆಬರಹ, ಧರ್ಮಸ್ಥಳ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್‌

ಧರ್ಮಸ್ಥಳ ಪ್ರಕರಣ: ದೂರುದಾರ ಗುರತಿಸಿದ ಜಾಗಗಳಲ್ಲಿ ಮೃತದೇಹಗಳಿಗೆ ಉತ್ಖನನ

Video: ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ಕೊಟ್ಟ ಚಿದಂಬರಂಗೆ ಬೆವರಿಳಿಸಿದ ಅಮಿತ್ ಶಾ: ವಿಡಿಯೋ

ವಿಜಯೇಂದ್ರನಿಂದ ನಾನು ಪಾಠ ಕಲಿಯಬೇಕಾ: ಸಿದ್ದರಾಮಯ್ಯ ರೋಷಾವೇಷ

Show comments