Webdunia - Bharat's app for daily news and videos

Install App

ಟಿಬೆಟ್ ರಾಜಕೀಯ ನಾಯಕತ್ವಕ್ಕೆ ದಲೈ ಲಾಮಾ ರಾಜೀನಾಮೆ

Webdunia
ಗುರುವಾರ, 10 ಮಾರ್ಚ್ 2011 (15:58 IST)
ಗಡೀಪಾರುಗೊಂಡಿರುವ ಟಿಬೆಟ್ ಸರಕಾರದ ರಾಜಕೀಯ ಮುಖಂಡನ ಸ್ಥಾನದಿಂದ ತಾನು ಕೆಳಗಿಳಿಯುತ್ತಿರುವುದಾಗಿ ದಲೈ ಲಾಮಾ ಗುರುವಾರ ಪ್ರಕಟಿಸಿದ್ದಾರೆ. ಆದರೆ ಟಿಬೆಟ್‌ಗಾಗಿನ ಹೋರಾಟದಿಂದ ತಾನು ಹಿಂದಕ್ಕೆ ಸರಿಯುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಟಿಬೆಟ್ ರಾಷ್ಟ್ರೀಯ ದಂಗೆಯ ದಿನದ 52ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದಲೈ ಲಾಮಾ, ಚುನಾಯಿತ ನಾಯಕನ ಔಪಚಾರಿಕ ಅಧಿಕಾರದಿಂದ ತಾನು ಹಿಂದಕ್ಕೆ ಸರಿಯುವ ಸಂಬಂಧ ಟಿಬೆಟ್ ಸನ್ನದಿಗೆ ತಿದ್ದುಪಡಿ ತರಲು ಮಾರ್ಚ್ 14ರಂದು ಆರಂಭವಾಗಲಿರುವ ಗಡೀಪಾರುಗೊಂಡಿರುವ 14ನೇ ಟಿಬೆಟ್ ಸಂಸತ್ತಿನ 11ನೇ ಅಧಿವೇಶನದ ಸಂದರ್ಭದಲ್ಲಿ ಔಪಚಾರಿಕ ಪ್ರಸ್ತಾವನೆ ಮಾಡಲಿರುವುದಾಗಿ ಹೇಳಿದರು.

ಟಿಬೆಟ್ ಜನರಿಂದ ಮುಕ್ತವಾಯಗಿ ಚುನಾಯಿಸಲ್ಪಡುವ ಒಬ್ಬ ನಾಯಕನ ಅಗತ್ಯ ಟಿಬೆಟಿಯನ್ನರಿಗೆ ಇದೆ. ಆ ವ್ಯಕ್ತಿಗೆ ತಾನು ಅಧಿಕಾರ ಹಸ್ತಾಂತರಿಸುವುದಾಗಿ 1960ರಿಂದಲೇ ದಲೈ ಲಾಮಾ ಆಗಾಗ ಹೇಳಿಕೊಂಡು ಬಂದಿದ್ದರು.

ಇದನ್ನು ಉಲ್ಲೇಖಿಸಿರುವ ಅವರು, ಈಗ ನಾವು ಸ್ಪಷ್ಟವಾಗಿ ಆ ಕಾಲಘಟ್ಟಕ್ಕೆ ತಲುಪಿದ್ದೇವೆ. ರಾಜಕೀಯ ನಾಯಕತ್ವದಲ್ಲಿ ಮುಂದುವರಿಯಬೇಕು ಎಂದು ಟಿಬೆಟ್ ಮತ್ತು ಇತರರ ಬೆಂಬಿಡದ ಮನವಿಗಳಿಗೆ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ. ನಾನು ಅಧಿಕಾರವನ್ನು ತ್ಯಜಿಸುವುದೆಂದರೆ ಅದರ ಅರ್ಥ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಎಂದಲ್ಲ ಎಂದು ಹೇಳಿದ್ದೇನೆ. ನನಗೆ ಯಾವುದೇ ರೀತಿಯಲ್ಲಿ ನೋವಾಗಿ ನಾನು ಈ ನಿರ್ಧಾರಕ್ಕೆ ಬಂದಿಲ್ಲ. ಇದರಿಂದ ಟಿಬೆಟ್ ಜನರಿಗೆ ಹಿತವಾಗಲಿದೆ ಎಂದರು.

ಚೀನಾ ಸೇನೆಯು ಟಿಬೆಟ್‌ಗೆ ದಾಳಿ ಮಾಡಿದ ನಂತರ 1950ರಲ್ಲಿ ದಲೈ ಲಾಮಾ ಅವರನ್ನು 'ರಾಷ್ಟ್ರ ನಾಯಕ' ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಆಗ ಅವರ ವಯಸ್ಸು ಕೇವಲ 15. ಚೀನಾ ಆಡಳಿತದ ವಿರುದ್ಧದ ಅವರ ಬಂಡಾಯ ವಿಫಲವಾದ ನಂತರ 1959ರಲ್ಲಿ ಟಿಬೆಟ್‌ನಿಂದ ಪರಾರಿಯಾಗಿದ್ದರು.

ಟಿಬೆಟಿಯನ್ನರು ನನ್ನ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ ಇಟ್ಟಿದ್ದಾರೆ. ಅವರ ಮತ್ತು ಟಿಬೆಟ್ ಹಿತಕ್ಕಾಗಿನ ನನ್ನ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾನು ಹೋರಾಟದಿಂದ ಹಿಂದಕ್ಕೆ ಸರಿಯುತ್ತಿಲ್ಲ. ನನ್ನ ನಿಲುವನ್ನು ಅರ್ಥ ಮಾಡಿಕೊಂಡು ನನ್ನ ನಿರ್ಧಾರವನ್ನು ಬೆಂಬಲಿಸುವ ನಂಬಿಕೆ ನನ್ನಲ್ಲಿದೆ ಎಂದು ತನ್ನ ನಿಲುವನ್ನು ದಲೈ ಲಾಮ ಸ್ಪಷ್ಟವಾಗಿಯೇ ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Karnataka Weather: ತಣ್ಣಗಾಯಿತೇ ಮಳೆಯ ಅಬ್ಬರ, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

Show comments