Webdunia - Bharat's app for daily news and videos

Install App

ಜ್ಞಾನ ತಪ್ಪಿಸಿ ಯುವತಿಯನ್ನು ರೇಪ್ ಮಾಡಿದ ಕಾಲ್ ಸೆಂಟರ್ ಮಾಲೀಕ

Webdunia
ಸೋಮವಾರ, 13 ಜನವರಿ 2014 (12:07 IST)
PR
PR
ನೊಯ್ಡಾ: ನೊಯ್ಡಾದಲ್ಲಿ ತಮಗೆ ಮತ್ತಿನ ಔಷಧಿ ನೀಡಿ ಜ್ಞಾನ ತಪ್ಪಿಸಿದ ನಂತರ ಕಂಪೆನಿ ಮಾಲೀಕ ಮತ್ತು ಅವನ ಸಹಚರ ರೇಪ್ ಮಾಡಿದ್ದಾರೆಂದು ಕಾಲ್ ಸೆಂಟರ್ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.ಕಾಲ್ ಸೆಂಟರ್ ಮಾಲೀಕ ಶೈಲೇಂದ್ರ ಚೌಹಾನ್ ಮತ್ತು ಅವನ ಮ್ಯಾನೇಜರ್‌ ವಿರುದ್ಧ ನೊಯ್ಡಾ ಪೊಲೀಸರು ರೇಪ್ ಕೇಸ್ ದಾಖಲಿಸಿದ್ದಾರೆ. ಗಾಜಿಯಾಬಾದ್ ಜಿಲ್ಲೆಯಲ್ಲಿ ಒಂದು ಸಂಸ್ಥೆಯಲ್ಲಿ ಯುವತಿ ಮತ್ತು ಚೌಹಾನ್ ಕೆಲಸ ಮಾಡುತ್ತಿದ್ದು, ಚೌಹಾನ್ ಮುಂಚಿನ ಕಂಪೆನಿಯನ್ನು ತ್ಯಜಿಸಿ ಅವನದ್ದೇ ಸ್ವಂತ ಕಾಲ್ ಸೆಂಟರ್ ಆರಂಭಿಸಿದ್ದ. ಕಳೆದ ಮೇನಲ್ಲಿ ತಮ್ಮ ಕಂಪೆನಿಗೆ ಸೇರುವಂತೆ ಯುವತಿಗೆ ಆಹ್ವಾನ ನೀಡಿದ್ದ. ಅದರಂತೆ ಯುವತಿ ಅವನ ಕಂಪೆನಿಯಲ್ಲಿ ಉದ್ಯೋಗಿಯಾಗಿ ಸೇರಿದ್ದಳು.

2013 ರ ಜುಲೈನಲ್ಲಿ ಚೌಹಾನ್ ತನಗೆ ಮತ್ತಿನ ಔಷಧಿ ಬೆರೆಸಿದ ತಂಪು ಪಾನೀಯ ನೀಡಿದಾಗ ಜ್ಞಾನತಪ್ಪಿಹೋಯಿತು. ಆಗ ಚೌಹಾನ್ ಮತ್ತು ಮ್ಯಾನೇಜರ್ ಜಗಜೀವನ್ ಇಬ್ಬರೂ ರೇಪ್ ಮಾಡಿದ್ದಾರೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.ಕೆಲಸ ಕಳೆದುಕೊಳ್ಳುವ ಭಯದಿಂದ ಯುವತಿ ಮೊದಲಿಗೆ ದೂರು ನೀಡಿರಲಿಲ್ಲ. ಚೌಹಾನ್ ನಂತರ ಕರೆ ಮಾಡಿ ಅವಳನ್ನು ಮದುವೆಯಾಗುವ ಭರವಸೆ ನೀಡಿದ್ದು, ನಂತರ ಕೆಲವೇ ದಿನಗಳಲ್ಲಿ ನಿರಾಕರಿಸಿದ್ದ ಎಂದು ಯುವತಿ ಹೇಳಿದ್ದಾಳೆ.

ಮೊದಲಿಗೆ ಚೌಹಾನ್ ಮತ್ತು ಮ್ಯಾನೇಜರ್ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ನಂತರ ಜಿಲ್ಲಾ ಕೋರ್ಟ್‌ ಮೆಟ್ಟಿಲು ಹತ್ತಿದ ಬಳಿಕ ಜಿಲ್ಲಾ ಕೋರ್ಟ್ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments