Webdunia - Bharat's app for daily news and videos

Install App

ಜಮ್ಮು ಗಡಿಯಲ್ಲಿ ಪಾಕ್ ಪಡೆಗಳಿಂದ ಗುಂಡಿನ ದಾಳಿ

Webdunia
ಶನಿವಾರ, 21 ಮಾರ್ಚ್ 2009 (16:49 IST)
ಕೆಲವು ತಿಂಗಳ ಅಂತರದ ಬಳಿಕ ಮತ್ತೆ ತನ್ನ ಕದನ ವಿರಾಮ ಚಾಳಿ ಮುಂದುವರಿಸಿರುವ ಪಾಕಿಸ್ತಾನೀ ಪಡೆಗಳು, ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಶುಕ್ರವಾರ ರಾತ್ರಿಯಿಡೀ ಭಾರತೀಯ ನೆಲೆಗಳತ್ತ ನಿರಂತರ ಗುಂಡಿನ ದಾಳಿ ನಡೆಸಿವೆ.

ರಾತ್ರಿ 10 ಮತ್ತು ಅಪರಾತ್ರಿ 3 ಗಂಟೆಯ ನಡುವೆ ಉರಿ ವಲಯದ ಕಮಲ್‌ಕೋಟೆಯಲ್ಲಿರುವ ಭಾರತೀಯ ನೆಲೆಗಳತ್ತ ಪಾಕಿಸ್ತಾನಿ ಪಡೆಗಳು 1500ರಿಂದ 2000 ಸುತ್ತಿನ ಗುಂಡಿನ ಮಳೆಗರೆದವು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಈ ಗುಂಡಿನ ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಪ್ರಕಾಶ್ ಸಿಂಗ್ ಎಂಬವರು ಗಾಯಗೊಂಡಿದ್ದಾರೆ. ಈ ಗುಂಡಿನ ದಾಳಿ ಅಪ್ರಚೋದಿತವಾಗಿದ್ದು, ಭಾರತೀಯ ಪಡೆಗಳು ಕೂಡ ಲಘು ಗುಂಡಿನ ಮೂಲಕ ಪ್ರತಿದಾಳಿ ನಡೆಸಿದವು ಎಂದು ಹೇಳಿದರು. 2003ರಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಈ ಗಡಿಭಾಗದಲ್ಲಿ ಕದನ ವಿರಾಮ ಘೋಷಿಸಿದ್ದವು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments