ಶೇಖರ್ ಪೂಜಾರಿ :
ನವದೆಹಲಿಯಲ್ಲಿ ಇಂದು ಜನಸಾಗರ ನೆರೆದಿತ್ತು. ದೆಹಲಿಯ ಜಪಾನೀಸ್ ಮೈದಾನದಲ್ಲಿ ಮೋದಿ ಭಾಷಣಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿತ್ತು. ಬಿಜೆಪಿಯ ನಾಯಕರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನವಜೋದ್ ಸಿಂಗ್ ಸಿದ್ದು ಮೊದಲಾದವರು ಹಾಜರಿದ್ದರು. ಆದ್ರೆ ಈ ಬೃಹತ್ ಐತಿಹಾಸಿಕ ರ್ಯಾಲಿಗೆ ಬಿಜೆಪಿಯ ವರಿಷ್ಟರಾದ ಎಲ್ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಗೈರು ಹಾಜರಾಗಿದ್ದರು. ಈ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜನತೆಗೆ ಗೊತ್ತಾಗಿದೆ. ಬಿಜೆಪಿಯಲ್ಲಿನ ಅಸಮಾಧಾನದ ಹೊಗೆ ಇಂದಿನ ಐತಿಹಾಸಿಕ ರ್ಯಾಲಿಯಲ್ಲಿ ಎದ್ದು ಕಾಣುತ್ತಿತ್ತು.
ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
ಮೊದಲಿಗೆ ಮಾತನಾಡಿದ ನವಜೋದ್ ಸಿಂಗ್ ಸಿದ್ದು ಪ್ರಧಾನಿ ವಿರುದ್ಧ ಹರಿ ಹಾಯ್ದರು. ಪ್ರಧಾನಿ ಮನಮೋಹನ್ ಸಿಂಗ್ ಸರ್ದಾರ್ಜಿಯೇ ಅಲ್ಲ. ಅವರು ಒಬ್ಬ ನಾಲಾಯಕ್ ಪ್ರಧನಿ ಎಂದು ಸಿದ್ದು ವಾಗ್ದಾಳಿ ನಡೆಸಿದರು. ಪ್ರಧಾನಿ ಮನಮೋಹನ್ ಸಿಂಗ್ ಭಾರತವನ್ನು ಸೋನಿಯಾ ಮಯವಾಗಿ ಮಾಡಲು ಮುಂದಾಗಿದ್ದಾರೆ. ಆದರೆ ನರೇಂದ್ರ ಮೋದಿ ಭಾರತವನ್ನು ಸೋನಾಮಯ ಅಂದ್ರೆ ಚಿನ್ನದ ನಾಡನ್ನಾಗಿ ಮಾಡುವ ಯತ್ನದಲ್ಲಿದ್ದಾರೆ ಎಂದು ನವಜೋದ್ ಸಿಂಗ್ ಹೇಳಿದ್ರು. ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...