ನವದೆಹಲಿ: ಕಾಶ್ಮೀರದ ಕಿಸ್ತ್ವಾರ್ನಲ್ಲಿ ಕೋಮು ಹಿಂಸಾಚಾರದ ವಿಷಯ ಸೋಮವಾರ ಸಂಸತ್ತಿನ ಕೇಂದ್ರಬಿಂದುವಾಗಿತ್ತು. ಆದರೆ ಒಬ್ಬರು ಸಂಸತ್ ಸದಸ್ಯರು ಮಾತ್ರ ಇದ್ಯಾವ ಚಿಂತೆಯೂ ಇಲ್ಲದೇ ಆರಾಮವಾಗಿ ನಿದ್ರೆಗೆ ಶರಣಾಗಿದ್ದರು. ಈದ್ ಸಂದರ್ಭದಲ್ಲಿ ಶುಕ್ರವಾರ ಆರಂಭವಾದ ಗಲಭೆಗಳ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿಕೆ ನೀಡುತ್ತಿರಬೇಕಾದರೆ, ಕಾಂಗ್ರೆಸ್ ಪಲ್ಲವಿ ಗೋವರ್ದನ್ ರೆಡ್ಡಿ ನಿದ್ರಾಲೋಕದಲ್ಲಿ ಮುಳುಗಿದ್ದರು.
ಕಾಶ್ಮೀರ ಹಿಂಸಾಚಾರದಲ್ಲಿ ಮೂವರು ಸತ್ತಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 6 ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇವೆಲ್ಲ ವಿಷಯವನ್ನು ಚಿದಂಬರಂ ಸಂಸತ್ತಿನಲ್ಲಿ ಬಿಡಿಸಿ, ಬಿಡಿಸಿ ಹೇಳುತ್ತಿದ್ದರೆ, ನಮಗ್ಯಾಕೆ ಅದರ ಉಸಾಬರಿ ಎನ್ನುವಂತೆ ಗೋವರ್ದನ್ ರೆಡ್ಡಿ ತೂಕಡಿಸುತ್ತಿದ್ದರು.