ತಾವು ರಾಜೀನಾಮೆ ನೀಡಿದ್ದಕ್ಕಾಗಿ ಕೇಜ್ರಿವಾಲ್ ಒಮ್ಮೆಯೂ ಸಹ ಪಶ್ಚಾತಾಪವನ್ನು ವ್ಯಕ್ತಪಡಿಸಿರಲಿಲ್ಲ. ಆದರೆ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ನಾನು ಭಾವೋದ್ರೇಕಕ್ಕೊಳಗಾಗಿ ರಾಜೀನಾಮೆಯನ್ನು ನೀಡಬಾರದಿತ್ತು ಎಂದು ಹೇಳಿಕೊಂಡಿದ್ದಾರೆ.
ಸೈಂಧಾತಿಕವಾಗಿ ರಾಜೀನಾಮೆ ನೀಡಿರುವುದಕ್ಕೆ ನನಗೆ ಪಶ್ಚಾತಾಪವಿಲ್ಲ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಜನಲೋಕಪಾಲ್ ಜಾರಿಯಾಗುವುದನ್ನು ತಡೆದ ರಾತ್ರಿಯೇ ನಾನು ಆ ನಿರ್ಧಾರವನ್ನು ಮಾಡಬಾರದಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 49 ದಿನಕ್ಕೆ ಆಪ್ ನಾಯಕ ರಾಜೀನಾಮೆ ನೀಡಿದ್ದರು.