ದೆಹಲಿಯಲ್ಲಿ ಸಮೀಕ್ಷೆ ನಡೆಸಿದ ಶೇ.58ರಷ್ಟು ಜನರು ಉತ್ತಮ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಮುಂಬೈನಲ್ಲಿ ಕೇಜ್ರಿವಾಲ್ ಅವರಿಗೆ ಅತ್ಯಧಿಕ ಅನುಮೋದನೆ ರೇಟಿಂಗ್ ಸಿಕ್ಕಿದೆ.ಕೇಜ್ರಿವಾಲ್ ಧರಣಿ ನಡೆಸಿದ್ದು ಸರಿಯಾಗಿದೆ ಎಂದು ಅರ್ಧದಷ್ಟು ಜನರು ಹೇಳಿದ್ದಾರೆ.
ಮುಂಬೈನಲ್ಲಿ ಶೇ. 58 ಮತ್ತು ದೆಹಲಿಯಲ್ಲಿ ಶೇ. 51 ಜನರು ದೆಹಲಿಯಲ್ಲಿ ಧರಣಿ ಮಾಡಿದ್ದು ಸರಿ ಎಂದು ಹೇಳಿದ್ದಾರೆ.ದೆಹಲಿಯಲ್ಲಿ ಅವರ ಬೆಂಬಲದ ನೆಲೆ ಭದ್ರವಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಣ್ಣಿರಿಸಿರುವ ಎಎಪಿ ಬಲಪಡೆಯಬಹುದೆಂದು ಭಾವಿಸಲಾಗಿದೆ. ಅರ್ಧಕ್ಕೂ ಹೆಚ್ಚು ಪ್ರತಿಕ್ರಿಯೆದಾರರು ಅಸೆಂಬ್ಲಿ ಚುನಾವಣೆ ನಡೆದರೆ ಎಎಪಿಗೆ ಮತ್ತೆ ವೋಟ್ ಮಾಡುವುದಾಗಿ ಹೇಳಿದ್ದಾರೆ.